Publish Date: Wed, 21 Dec 2022 (20:11 IST)
Updated Date: Wed, 21 Dec 2022 (20:14 IST)
ಮಹಾರಾಷ್ಟ್ರ ನಾಯಕರಿಂದ ಪುಂಡಾಟಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಕರ್ನಾಟಕದ CM ವೀಕ್ CM, ಅಮಿತ್ ಶಾ ಕರೆದು ಮಾತನಾಡಿದ್ರೂ ಗಲಾಟೆ ಆಗ್ತಿದೆ. ಶಾಂತಿ ಕಾಪಾಡಿ ಅಂತಾ ಅಮಿತ್ ಶಾ ಹೇಳಿದ್ರು, ಆದರೂ ಅವರ ಮಾತಿಗೆ ಗೌರವ ಕೊಡುತ್ತಿಲ್ಲ. ನಮ್ಮ CM ಗಟ್ಟಿ ಧ್ವನಿಯಲ್ಲಿ ಹೇಳಬೇಕಿತ್ತು, ಆದ್ರೆ ನಮ್ಮ ಮುಖ್ಯಮಂತ್ರಿ ದೊಡ್ಡ ಹೇಳಿಕೆ ನೀಡಿಲ್ಲ. ಕರ್ನಾಟಕ-ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ತ್ರಿಬಲ್ ಇಂಜಿನ್ ಸರ್ಕಾರ ಇದ್ದರೂ ಪ್ರಯೋಜನವಾಗ್ತಿಲ್ಲ. ರಾಜ್ಯದ ನೆಲ-ಜಲ-ಭಾಷೆಯಲ್ಲಿ ನಾವೆಲ್ಲರೂ ಒಂದಾಗುತ್ತೇವೆ, ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ವರದಿ ಅಂತಾ ಬೆಳಗಾವಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.