Select Your Language

Notifications

webdunia
webdunia
webdunia
webdunia

ಕನ್ನಡ ಸರಿಯಾಗಿ ಉಚ್ಛರಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಲೇವಡಿ

ಕನ್ನಡ ಸರಿಯಾಗಿ ಉಚ್ಛರಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಲೇವಡಿ
ಬೆಂಗಳೂರು , ಸೋಮವಾರ, 7 ಮೇ 2018 (09:09 IST)
ಬೆಂಗಳೂರು: ನಿನ್ನೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಕೂಡಲ ಸಂಗಮ ಎಂದು ಹೇಳುವಾಗ ಎಡವಟ್ಟು ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

‘ಕುಂಡಲ ಸಂಗಮ ಅಲ್ಲ, ಅದು ಕೂಡಲ ಸಂಗಮ ಪ್ರಧಾನಿ ಅವರೇ. ಕನ್ನಡ ಪದವನ್ನು ತಪ್ಪಾಗಿ ಹೇಳುವುದು ದೊಡ್ಡ ವಿಷಯವಲ್ಲ. ಕನ್ನಡಿಗರು ಹೃದಯವಂತರು. ನಿಮ್ಮನ್ನು ಕ್ಷಮಿಸಿಯಾರು. ಆದರೆ ನಿಮಗೆ ಹೃದಯವಂತಿಕೆ ಇಲ್ಲ. ಇನ್ನೊಬ್ಬರ ತಪ್ಪನ್ನು ಆಡಿಕೊಂಡು ನಗುತ್ತೀರಿ’ ಎಂದು ಪ್ರಧಾನಿಗೆ ಸಿಎಂ ಟಾಂಗ್ ಕೊಟ್ಟಿದ್ದಾರೆ.

ಕೂಡಲ ಸಂಗಮ ಎಂದು ಹೇಳುವಾಗ ಕುಂಡಲ ಸಂಗಮ ಎಂದು ಲಿಂಗಾಯತರಿಗೆ ಪ್ರಧಾನಿ ಮೋದಿ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ