Publish Date: Mon, 07 May 2018 (07:51 IST)
Updated Date: Mon, 07 May 2018 (07:53 IST)
ಹುಬ್ಬಳ್ಳಿ: ಒಂದೆಡೆ ಪ್ರಧಾನಿ ಮೋದಿ ಮಾತಿನ ಮೋಡಿ ನಡೆಯುತ್ತಿದ್ದರೆ, ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಅಮಿತ್ ಶಾ ತಮ್ಮ ಮಾತಿನ ಝಲಕ್ ತೋರಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಂಡ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಹಾನದಿ ವಿವಾದದ ಬಗ್ಗೆ ಭಾರೀ ಭರವಸೆಯೊಂದನ್ನು ನೀಡಿದ್ದಾರೆ.
‘ಒಂದು ವೇಳೆ ನೀವು ಬಿಜೆಪಿ ಗೆಲ್ಲಿಸಿ ಯಡಿಯೂರಪ್ಪ ಸರ್ಕಾರವನ್ನು ಅಸ್ಥಿತ್ವಕ್ಕೆ ತಂದರೆ ಮುಂದಿನ 6 ತಿಂಗಳೊಳಗಾಗಿ ಮಹಾನದಿ ವಿವಾದಕ್ಕೆ ತಕ್ಕ ಅಂತ್ಯ ಹಾಡುತ್ತೇವೆ. ಕುಡಿಯುವ ನೀರಿಗಾಗಿ ನೀವು ಅಲೆದಾಡುವ ಸ್ಥಿತಿ ಬಾರದಂತೆ ಮಾಡುತ್ತೇವೆ’ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಆ ಮೂಲಕ ಕರ್ನಾಟಕದ ಉತ್ತರ ಭಾಗದಲ್ಲಿ ಮಹದಾಯಿ ವಿಚಾರವಾಗಿ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಜನರನ್ನು ತಮ್ಮತ್ತ ಸೆಳೆಯಲು ಶಾ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.