Publish Date: Sun, 19 May 2019 (13:27 IST)
Updated Date: Sun, 19 May 2019 (13:29 IST)
ಕುಂದಗೋಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಯಿಂದ ಟೆಂಪಲ್ ರನ್ ನಡೆಯಿತು.
ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ್ದರು ಕುಸುಮಾ ಶಿವಳ್ಳಿ.
ಸಿದ್ದಾರೂಢ ಮಠದಿಂದ ಯರಗುಪ್ಪಿಗೆ ಕುಸುಮಾ ಶಿವಳ್ಳಿ ಭೇಟಿ ನೀಡಿದ್ರು. ದಿ. ಸಿ.ಎಸ್. ಶಿವಳ್ಳಿ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಮತದಾನ ಮಾಡಿದ್ರು.
ಇನ್ನು, ಕುಂದಗೋಳ ಉಪ ಚುನಾವಣೆಯಲ್ಲಿ ಕೈಕೊಟ್ಟಿವೆ ಇವಿಎಮ್ ಮಷಿನ್ಗಳು. ಕುಂದಗೋಳದ ಬೆನಕನಹಳ್ಳಿ ಮತಕೇಂದ್ರದಲ್ಲಿ ಘಟನೆ ನಡೆದಿದೆ.
ಕೈಕೊಟ್ಟ ಮೂರು ಇವಿಎಮ್ ಮಸಿನ್ಗಳನ್ನು ತಾಂತ್ರಿಕ ದೋಷ ಹಿನ್ನೆಲೆ 30 ನಿಮಿಷ ಮತದಾನ ಸ್ಥಗಿತಗೊಳಿಸಿ ಬದಲಾಯಿಸಲಾಯಿತು. ಇವಿಎಮ್ ಮಸಿನ್ಗಳನ್ನ ಬದಲಾವಣೆ ಮಾಡಿದ್ರು ಅಧಿಕಾರಿಗಳು.