Select Your Language

Notifications

webdunia
webdunia
webdunia
webdunia

ರಾಜ್ಯದ ಹೆಚ್ಚಿನ ಸಂಸದರಿಗೆ ಮಂತ್ರಿಗಿರಿ ಎಂದ ಬಿಎಸ್ವೈ

ರಾಜ್ಯದ ಹೆಚ್ಚಿನ ಸಂಸದರಿಗೆ ಮಂತ್ರಿಗಿರಿ ಎಂದ ಬಿಎಸ್ವೈ
ಬೆಂಗಳೂರು , ಬುಧವಾರ, 29 ಮೇ 2019 (16:06 IST)
ರಾಜ್ಯದಿಂದ ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಇದನ್ನು‌ ನಾನು‌ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ರಾಜ್ಯದಲ್ಲಿ ನಾವು ಚುನಾವಣೆಗೆ ಮತ್ತೆ‌ ಹೋಗಬೇಕು ಅನ್ನೋ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ನಾವು ಕಾಯುತ್ತೇವೆ. ಅವರಾಗಿಯೇ ಕಚ್ಚಾಡಿಕೊಂಡು ಮೈತ್ರಿ ಸರ್ಕಾರ ಬಿದ್ರೆ‌ ನಾವು ಸರ್ಕಾರ ರಚನೆಗೆ ಮುಂದಾಗುತ್ತೇವೆ. ನಾವಾಗಿಯೇ ಸರ್ಕಾರ‌ ಬೀಳುಸುವುದಿಲ್ಲ ಅಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಜಿಂದಾಲ್‌ ವಿರುದ್ಧ ಹೋರಾಟ‌ ಮಾಡುತ್ತೇವೆ. ಜೂ. 5 ರಂದು ಕೋರ್ ಕಮಿಟಿ ಸಭೆಯನ್ನು ಕರೆದಿದ್ದೇವೆ. ಅಲ್ಲಿ‌ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ರಾಜ್ಯದಿಂದ ಈ ಬಾರಿ ಸಚಿವ ಸಂಪುಟದಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಇದನ್ನು‌ ನಾನು‌ ಮೋದಿಯವರಿಗೆ ಮನವರಿಕೆ ಮಾಡಿಕೊಡುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಇಂದು ಅಮಿತ್ ಶಾ ಮತ್ತು ಮೋದಿ ಅವರನ್ನು ಭೇಟಿಯಾಗಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ತೀವ್ರ; ರಣತಂತ್ರಕ್ಕೆ ಮೊರೆಹೋದ ದೋಸ್ತಿ ನಾಯಕರು