Publish Date: Sat, 04 May 2019 (18:42 IST)
Updated Date: Sat, 04 May 2019 (18:44 IST)
ಅಮವಾಸ್ಯೆ ದಿನ ದೇವಸ್ಥಾನಕ್ಕೆ ಅಂತ ತೆರಳಿದ ದಂಪತಿ ಭೀಕರವಾಗಿ ಸಾವನ್ನಪ್ಪಿ ಮಸಣ ಸೇರಿದ ದಾರುಣ ಘಟನೆ ನಡೆದಿದೆ.
ಡಿವೈಡರ್ ಗೆ ಇನ್ನೋವ ಕಾರ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಮವಾಸ್ಯೆ ಹಿನ್ನಲೆಯಲ್ಲಿ ಉಕ್ಕಡಗಾತ್ರಿಗೆ ತೆರಳುತ್ತಿದ್ದ ದಂಪತಿ ಸಾವನ್ನಪ್ಪಿದ್ದಾರೆ.
ದಾವಣಗೆರೆ ನಗರದ ಹೊಸ ಕುಂದುವಾಡ ಬಳಿಯ NH4 ನಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ಶಿವಪ್ರಕಾಶ್ (43), ಉಮಾ(40) ಸಾವನ್ನಪ್ಪಿದ ದಂಪತಿಯಾಗಿದ್ದಾರೆ.
ಡ್ರೈವರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ದಕ್ಷಿಣ ಸಂಚಾರಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.