Publish Date: Sun, 30 Aug 2020 (17:56 IST)
Updated Date: Sun, 30 Aug 2020 (18:04 IST)
ಬಿಜೆಪಿಯ ಸಂಸದರೊಬ್ಬರು ಬ್ಲ್ಯೂ ಫಿಲ್ಮ್ ಹೀರೊ ಆಗೋದಕ್ಕೆ ಮಾತ್ರ ಲಾಯಕ್ಕು ಅಂತ ಕೆಪಿಸಿಸಿ ವಕ್ತಾರ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಅಸಹ್ಯಕರವಾಗಿರುವ ಆಡಿಯೋ ಸಂಭಾಷಣೆಯನ್ನು ಶೀಘ್ರದಲ್ಲಿಯೇ ಬಹಿರಂಗಗೊಳಿಸುವುದಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ನನ್ನ ರಾಜಕೀಯ ಹಾಗೂ ವಯಕ್ತಿಕ ಜೀವನದಲ್ಲಿ ನಾನು ಯಾರೊಂದಿಗೂ ಬ್ಲ್ಯಾಕ್ ಮೇಲ್ ಮಾಡಿಲ್ಲ. ಒಂದು ವೇಳೆ ಮಾಡಿದ್ರೆ ಅದನ್ನು ಸಾಬೀತು ಪಡಿಸಬೇಕೆಂದು ಸವಾಲ್ ಹಾಕಿದ್ದಾರೆ.
ಇನ್ನು, ನನ್ನ ಆರೋಪಕ್ಕೆ ನಾನು ಬದ್ಧನಾಗಿದ್ದು ಶೀಘ್ರದಲ್ಲಿಯೇ ಜನರ ಮುಂದೆಯೇ ಪ್ರತಾಪ್ ಸಿಂಹರ ಯೋಗ್ಯತೆಯನ್ನು ಬಯಲು ಮಾಡುವೆ ಎಂದಿದ್ದಾರೆ.