Publish Date: Fri, 24 Jul 2020 (23:30 IST)
Updated Date: Fri, 24 Jul 2020 (23:33 IST)
ಕೊರೊನಾ ನಡುವೆಯೂ ಕೆಲಸ ಮಾಡುತ್ತಿರುವ ಸಾರಿಗೆ ಸಿಬ್ಬಂದಿಗೆ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ.
ರಾಜ್ಯ ಸರಕಾರವು ಸಾರಿಗೆ ಇಲಾಖೆಗೆ ನಾಲ್ಕು ತಿಂಗಳ ವೇತನವನ್ನು ಬಿಡುಗಡೆ ಮಾಡಿದೆ.
ಸಾರಿಗೆ ಸಂಸ್ಥೆಗಳ ನೌಕರರ ವೇತನಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಹಣ ಬಿಡುಗಡೆ ಮಾಡಿದ್ದಾರೆ.
ಒಟ್ಟು 961 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಸಿಎಂಗೆ ಸಚಿವ ಲಕ್ಷ್ಮಣ ಸವದಿ ಧನ್ಯವಾದ ತಿಳಿಸಿದ್ದಾರೆ.