Publish Date: Tue, 23 Jun 2020 (16:51 IST)
Updated Date: Tue, 23 Jun 2020 (16:52 IST)
ಬೀಜ ರಸಗೊಬ್ಬರ ಮಾರಾಟ ವಿಚಾರದಲ್ಲಿ ರೈತರಿಗೆ ಅನಗತ್ಯ ಕಿರುಕುಳ ಕೊಡಲಾಗುತ್ತಿದೆ. ರೈತರಿಗೆ ಬಲವಂತವಾಗಿ ಗೊಬ್ಬರ ಖರೀದಿಸಲು ಕಿರುಕುಳ ಕೊಡಲಾಗುತ್ತಿದೆ.
ಈ ಬಗ್ಗೆ ಕ್ರಮ ಕೈಗೊಳ್ಳದ ಕೃಷಿ ಇಲಾಖೆ ಜೆಡಿ ವಿರುದ್ಧ ಸಚಿವ ಲಕ್ಷ್ಮಣ ಸವದಿ ಫುಲ್ ಗರಂ ಆದ ಘಟನೆ ನಡೆದಿದೆ.
ರಾಯಚೂರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬೀದ ಬೆವರಿಳಿಸಿದ್ದಾರೆ ಡಿಸಿಎಂ ಸವದಿ.
ರಸಗೊಬ್ಬರ ಮಾರಾಟದಲ್ಲಿ ನಡೆಯುತ್ತಿರುವ ಗೋಲಮಾಲ್ ಹಿನ್ನೆಲೆಯಲ್ಲಿ ಡಿಸಿಎಂ ಸವದಿ ಪ್ರಶ್ನೆಗೆ ತಬ್ಬಿಬ್ಬಾದರು ಕೃಷಿ ಇಲಾಖೆ ಜೆಡಿ ಅಬೀದ್.
ಇನ್ನು, ಕೃಷಿ ಇಲಾಖೆ ಜೆಡಿ ಅಬೀದ್ ವಿರುದ್ಧ ದೇವದುರ್ಗ ಶಾಸಕ ಶಿವನಗೌಡ ವಾಗ್ದಾಳಿ ನಡೆಸಿದ್ದಾರೆ. ತಾಲೂಕು ಕೇಂದ್ರಗಳಿಗೆ ಭೇಟಿ ನೀಡದೆ ಬೇಜವಾಬ್ದಾರಿ ತೋರಿದ್ದಾರೆ ಅಂತ ಶಾಸಕ ಶಿವನಗೌಡ ನಾಯಕ ಆಕ್ರೋಶ ವ್ಯಕ್ತಪಡಿಸಿದರು.