Select Your Language

Notifications

webdunia
webdunia
webdunia
webdunia

ಬಸ್ ಓಡಿಸಲು ಸರಕಾರದಿಂದ ಹೊಸ ಪ್ಲ್ಯಾನ್

ಬಸ್ ಓಡಿಸಲು ಸರಕಾರದಿಂದ ಹೊಸ ಪ್ಲ್ಯಾನ್
ಹಾವೇರಿ , ಶುಕ್ರವಾರ, 29 ಮೇ 2020 (20:47 IST)
ಸಾರ್ವಜನಿಕರಿಗೆ ಹತ್ತಿರವಾದ ಸಾರಿಗೆ ಇಲಾಖೆ ನಷ್ಟ ಅನುಭವಿಸಿದರೂ, ಸಾರ್ವಜನಿಕ ಸೇವೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ವಾಹನವನ್ನು ಓಡಿಸಲಾಗುತ್ತಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲು ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಹೊಸ ಯೋಜನೆಯೊಂದಿಗೆ ಬಸ್ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಲಾಕ್‍ಡೌನ್ ಅವಧಿ ಮೇ 31 ರಂದು ಕೊನೆಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಬಸ್ ಸಂಚಾರ, ಪ್ರಯಾಣಿಕರ ಸಂಖ್ಯೆ ಕುರಿತಂತೆ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿ ಪ್ರಕಟವಾದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ವೆಚ್ಚದಲ್ಲಿ ಕಡಿಮೆ, ಆದಾಯ ಸೋರಿಕೆ ಕಡಿಮೆ ಮಾಡುವುದು, ನಿರ್ವಹಣೆಯ ವೆಚ್ಚ ಕಡಿತ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಲು ಸಲಹೆ ನೀಡಲಾಗಿದೆ. ಈ ಕಾರ್ಯದಲ್ಲಿ ಸಾರಿಗೆ ಇಲಾಖೆಯ ಎಲ್ಲ ಅಧಿಕಾರಿಗಳು ಸಿಬ್ಬಂದಿಗಳು ಸಹಕರಿಸುವಂತೆ ತಿಳಿಸಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಣ ನೀಡುವಂತೆ ಅಧಿಕಾರಿಯನ್ನು ಪೀಡಿಸಿದ ಬಿಜೆಪಿ ಶಾಸಕ?