Publish Date: Wed, 31 Jan 2024 (14:44 IST)
Updated Date: Wed, 31 Jan 2024 (14:19 IST)
ಬೆಂಗಳೂರು-ನಿಗಧಿತ ಅವಧಿಯೊಳಗೆ ವಿದ್ಯುತ್ ಬಿಲ್ ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಎಲಾಗುವುದು ಎಂದು ಬೆಸ್ಕಾ ಸಿಬ್ಬಂದಿ ವಿದ್ಯುತ್ ಗ್ರಾಹಕರಿಗೆ ಖಡಕ್ ಸೂಚನೆ ಕೊಟ್ಟಿದೆ.ಗೃಹಜ್ಯೋತಿ ಜಾರಿ ಬಳಿಕ ಗ್ರಾಹಕರು ಬಾಕಿ ವಿದ್ಯುತ್ ಬಿಲ್ ಪಾವತಿಗೆ ವಿಳಂಬ ಮಾಡಲಾಗ್ತಿದೆ ಹೀಗಾಗಿ 100 ರೂ ಬಾಕಿ ಇದ್ರೂ ಕನೆಕ್ಷನ್ ಕಟ್ ಮಾಡಿ ಅಂತ ಇಂಧನ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಹೀಗಾಗಿ ಬಾಕಿ ಕರೆಂಟ್ ಬಿಲ್ ಕಟ್ಟದ ಗ್ರಾಹಕರಿಗೆ ಮೀಟರ್ ರೀಡರ್ ಗಳಿಂದ ಅರಿವು ಮೂಡಿಸಲಾಗಿದೆ.ಗೃಹಜ್ಯೋತಿ ಅನುಷ್ಠಾನ ಬಳಿಕ ಗ್ರಾಹಕರಿಂದ ಕೋಟ್ಯಾಂತರ ರೂ ಕರೆಂಟ್ ಬಾಕಿ ಇದೆ ಹೀಗಾಗಿ ಕಟ್ಟುನಿಟ್ಟಾಗಿ ವಿದ್ಯುತ್ ಬಿಲ್ ಕಲೆಕ್ಷನ್ ಮಾಡುವಂತೆ ಮೀಟರ್ ರೀಡರ್ ಗಳಿಗೆ ಎಸ್ಕಾಂಗಳು ಸೂಚನೆ ನೀಡುತ್ತಿದ್ದಾರೆ.ಇದರಿಂದ ಗ್ರಾಹಕರ ಬಳಿ ಒತ್ತಡ ಹಾಕಿ ಕರೆಂಟ್ ಬಾಕಿ ಬಿಲ್ ಕಟ್ಟಿಸಿಕೊಳ್ಳು ಎಸ್ಕಾಂ ಸಿಬ್ಬಂದಿ ಮುಂದಾಗಿದ್ದಾರೆ.