Publish Date: Wed, 31 Jan 2024 (14:00 IST)
Updated Date: Wed, 31 Jan 2024 (14:16 IST)
ಬೆಂಗಳೂರು-ಕನ್ನಡ ಬೋರ್ಡ್ ಕಡ್ಡಾಯ ಕಾಯ್ದೆಯ ಸುಗ್ರಿವಾಜ್ಞೆ ತಿರಸ್ಕಾರ ವಿಚಾರವಾಗಿ ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ವಿಧಾನಸಭೆ ಬರುವ ಮುಂಚೆ ಸುಗ್ರಿವಾಜ್ಙೆ ಮಾಡಿದ್ದೇವು.ಭಾಷೆ ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ.ನಾಗರಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಬಾರದು.ಈ ನಿಟ್ಟಿನಲ್ಲಿ ಕಾಯ್ದೆ ಮಾಡಿದ್ದೇವು.ರಾಜ್ಯಪಾಲರು ಯಾಕೆ ವಾಪಸು ಕಳುಹಿಸಿದ್ರು ಅಂತ ಗೊತ್ತಿಲ್ಲ.ಈಗ ಚೆಕ್ ಮಾಡಿತ್ತೇನೆ.ವಿಧಾನಸಭೆಯಲ್ಲಿ ಬಿಲ್ ಪಾಸ್ ಮಾಡುತ್ತೇವೆ.ರಾಜ್ಯಪಾಲರಿಗೆ ನಾನು ಮನವಿ ಮಾಡುತ್ತೇನೆ.ರಾಜ್ಯದ ಪರವಾಗಿ ಈ ಬಿಲ್ ತಂದಿದ್ದೆವೆ.ಯಾರೂ ಕೂಡ ವಿರೋಧ ವ್ಯಕ್ತಪಡಿಸಿಲ್ಲ.ಈ ಬಿಲ್ ಪಾಸ್ ಬಗ್ಗೆ ರಾಜ್ಯಪಾಲರು ಮರು ಪರಿಶೀಲನೆ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.