Publish Date: Wed, 18 Oct 2023 (21:00 IST)
Updated Date: Wed, 18 Oct 2023 (19:19 IST)
ತೆಲಂಗಾಣದಲ್ಲಿ ಸಚಿವ ಶಿವಾನಂದ ಪಾಟೀಲ್ ಕವಾಲಿ ಕಾರ್ಯಕ್ರಮದಲ್ಲಿ ಹಣ ತುಳಿದು, ಹಣ ಎರಚಾಡಿದ ಪ್ರಕರಣ ಸಂಬಂಧ ಶಾಸಕ ಅಶ್ವಥ್ ನಾರಾಯಣ ಖಂಡಿಸಿದ್ದಾರೆ.ಶಿವಾನಂದ ಪಾಟೀಲ್ ಕಾನೂನು ವಿರೋಧಿ ನಡೆ ತೋರಿಸಿದ್ದಾರೆ.ಶಿವಾನಂದ ಪಾಟೀಲರನ್ನು ತಕ್ಷಣ ಬಂಧಿಸಲಿ.ತೆಲಂಗಾಣ ಸರ್ಕಾರದ ಶಿವಾನಂದ ಪಾಟೀಲ್ ವಿರುದ್ಧ ದೂರು ದಾಖಲಿಸಿ ಬಂಧಿಸಲಿ.ರೈತರು ಬರದಲ್ಲಿ ಸಂಕಷ್ಟಲ್ಲಿರುವಾಗ ಒಬ್ಬ ಸಚಿವ ಹೀಗೆ ಹಣ ಎರಚಾಡೋದು ಎಷ್ಟು ಸರಿ?ಇದು ಜನಪ್ರತಿನಿಧಿ ನಡೆದುಕೊಳ್ಳುವ ರೀತಿ ಅಲ್ಲ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.