Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ
bangalore , ಬುಧವಾರ, 18 ಅಕ್ಟೋಬರ್ 2023 (20:13 IST)
ಮಾಜಿ ಸಚಿವ ಅಶ್ವಥ್ ನಾರಾಯಣ ಐಟಿ ದಾಳಿಯಲ್ಲಿ ಸಿಕ್ಕ ಹಣ‌ ಯಾರದ್ದು ಅಂತ ಹೇಳಿ ಮೊದಲು ಎಂದು ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ್ದಾರೆ.ಹಣ ಯಾರದ್ದು ಅಂತ ಹೇಳಿ ಅಂದ್ರೆ ಲೂಟಿ ರವು, ನಕಲಿ ಸ್ವಾಮಿ ಅಂತ ಮಾತಾಡ್ತೀರ,ನಿಮಗೆ ಉತ್ತರ ಕೊಡಕ್ಕಾಗಲ್ಲ, ನೀವು ಉತ್ತರ ಕೊಡಲು ತಯಾರಿಲ್ಲ.ಯಾಕೆ ಹಣ ಪತ್ತೆ ಆಯ್ತು ಅಂತ ಎಲ್ಲ ಆಫ್ ಆಗಿಬಿಟ್ಟಿದೆಯಾ?? ಎಂದು ಡಿಕೆಶಿವಕುಮಾರ್ ಗೆ ಅಶ್ವಥ್ ನಾರಾಯಣ ಟಕ್ಕರ್ ನೀಡಿದ್ದಾರೆ.
 
ಸಿದ್ದರಾಮಯ್ಯಗೆ ಅಧಿಕಾರ ಲಾಲಸೆ ಹೆಚ್ಚು.ಜನ ಅಷ್ಟೊಂದು ಕೊಟ್ರೂ, ಅಧಿಕಾರ ಸಿಕ್ಕಿದ್ರೂ ಇನ್ನೂ ಲೂಟಿ ಮಾಡಬೇಕೆಂಬ ದುರಾಸೆ.ನಿಮಗೆ ಒಂದು ಟ್ವೀಟ್ ಬೇರೆ ಕೇಡು.ಶಿಕ್ಷಣ ವಿರೋಧಿ ಸಿದ್ದರಾಮಯ್ಯ.ಹ್ಯೂಬ್ಲೋಟ್ ವಾಚ್ ಧರಿಸಿದ್ದವರು.ಕಾನೂನು ಗೊತ್ತಿಲ್ಲವಾ ನಿಮಗೆ, ಗಿಫ್ಟ್ ಬಂದ ಐಷಾರಾಮಿ ವಾಚ್ ಹಾಕಿಕೊಳ್ಳೋದಿಕ್ಕೆ ಕಾನೂನು ಇಲ್ವಾ?ಈ ಕಾನೂನು ಗೊತ್ತಿಲ್ಲದ ನೀವೆಂಥ ಮುಖ್ಯಮಂತ್ರಿ?ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಸಿದ್ದರಾಮಯ್ಯ ಅವರೇ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಬ್ ಕಾಣಿಸಿಕೊಂಡ ಬೆಂಕಿ