Select Your Language

Notifications

webdunia
webdunia
webdunia
webdunia

ನಟ ಯಶ್ ಮಾಡಿದ ಕೆಲಸಕ್ಕೆ ಮಂಗಳಾರತಿ ಮಾಡಿದ ಮಹಿಳೆಯರು

ನಟ ಯಶ್ ಮಾಡಿದ ಕೆಲಸಕ್ಕೆ ಮಂಗಳಾರತಿ ಮಾಡಿದ ಮಹಿಳೆಯರು
ಬೀದರ್ , ಶನಿವಾರ, 25 ಮೇ 2019 (17:45 IST)
ಚಿತ್ರ ನಟ ಯಶ್ ಮಾಡಿದ ಕೆಲಸಕ್ಕೆ ಮಹಿಳೆಯರೆಲ್ಲಾ ಸೇರಿಕೊಂಡು ಮಂಗಳಾರತಿ ಮಾಡಿದ್ದಾರೆ.

ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಭೀಕರ ಬರದಲ್ಲಿ ಕುಡಿಯವ ನೀರಿಗಾಗಿ ಪರದಾಡುತಿದ್ದ ಬೀದರ್ ಜನತೆಗೆ ಕೂಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಯಶೋ ಮಾರ್ಗ ಸಂಸ್ಥೆಯ ಮೂಲಕ ಔರಾದ್ ನ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಾ ಇದೆ.

ನೀರು ಸಿಗದೆ ಪರದಾಡ್ತಾ ಇರೋ ಗ್ರಾಮಕ್ಕೆ 12 ಸಾವಿರ ಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಇನ್ನು ಗ್ರಾಮದ ಮಹಿಳೆಯರು ಕೂಡ ನೀರಿನ ಟ್ಯಾಂಕರ್ ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಬೀದರ್ ಜಿಲ್ಲೆಯ ಯಶ್ ಅಭಿಮಾನಿಗಳು ಕೂಡ ತೀವ್ರ ನೀರಿನ ಸಮಸ್ಯೆ ಇರೋ ಗ್ರಾಮಗಳನ್ನ ಗುರುತಿಸಿ ನೀರನ್ನ ಪೂರೈಕೆ ಮಾಡ್ತಾ ಇದ್ದಾರೆ.

ಕಳೆದ ಬಾರಿ ಕೊಪ್ಪಳದ ಕೆರೆ ಅಭಿವೃದ್ಧಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಯಶ್, ಇದೀಗ ಬೀದರ್ ನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಾ ಇದ್ದು, ಬೀದರ್ ಜನರು ಕೂಡ ಯಶ್ ಅವರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಸೋತಿದ್ದಕ್ಕೆ ಆ ಅಂಗವನ್ನೇ ಕತ್ತರಿಸಿಕೊಂಡ ಅಭಿಮಾನಿ?