Publish Date: Thu, 15 Nov 2018 (16:20 IST)
Updated Date: Thu, 15 Nov 2018 (16:22 IST)
ಅಕ್ರಮ ಆಸ್ತಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನಿವೃತ್ತ ಸರ್ಕಾರಿ ನೌಕರನ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ಕೆಇಬಿ ನಿವೃತ್ತ ನೌಕರ ಕೆಂಪೇಗೌಡ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ಕೆಂಪೇಗೌಡ, ಕೆಇಬಿಯಲ್ಲಿ ಮೀಟರ್ ರೀಡರ್ ಆಗಿ ನಿವೃತ್ತರಾಗಿದ್ದರು.
ಕೆಲವು ತಿಂಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದ ಕೆಂಪೇಗೌಡ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.
ಮಂಡ್ಯದ ಯತ್ತಗದಹಳ್ಳಿ ರಸ್ತೆಯಲ್ಲಿರುವ ಕೆಂಪೇಗೌಡರ ಮನೆಯಲ್ಲಿ ಸುಮಾರು ಒಂದು ಗಂಟೆಯಿಂದ ಶೋಧ ವನ್ನು ಎಸಿಬಿ ಅಧಿಕಾರಿಗಳು ನಡೆಸಿದರು.