Publish Date: Fri, 05 Oct 2018 (17:58 IST)
Updated Date: Fri, 05 Oct 2018 (18:00 IST)
ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಕೆಐಡಿಬಿ ಅಧಿಕಾರಿಗೆ ಶಾಕ್ ನೀಡಿದ್ದಾರೆ.
ಬೆಂಗಳೂರಿನ ಲ್ಲಿ ಕೆಐಡಿಬಿ ಅಧಿಕಾರಿಯಾಗಿರುವ ಟಿ. ಆರ್ . ಸ್ವಾಮಿ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ತುಮಕೂರಿನಲ್ಲಿ ಟಿ. ಆರ್. ಸ್ವಾಮಿ ಸಹೋದರನ ಮನೆ ಮೇಲೂ ಎಸಿಬಿ ದಾಳಿ ಏಕಕಾಲಕ್ಕೆ ನಡೆಸಲಾಗಿದೆ.
ಟಿ. ಆರ್. ಸ್ವಾಮಿ ಸಹೋದರ ಗುತ್ತಿಗೆದಾರ ರಾಮಲಿಂಗಾ ರೆಡ್ಡಿ ಮನೆ ಮೇಲೆ ಸಹ ದಾಳಿ ನಡೆಸಲಾಗಿದೆ. ಇಷ್ಟೇ ಅಲ್ಲ
ಗುಬ್ಬಿ ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ ಆರು ಗಂಟೆಗೆ ದಾಳಿ ನಡೆಸಿ ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು, ಮಹತ್ವದ ದಾಖಲೆ ಗಳ ಪರಿಶೀಲನೆ ನಡೆಸಿದರು.