Select Your Language

Notifications

webdunia
webdunia
webdunia
webdunia

ಅಕ್ರಮ ಆಸ್ತಿ: ಎಸಿಬಿ ಅಧಿಕಾರಿಗಳ ದಾಳಿ

ಅಕ್ರಮ ಆಸ್ತಿ: ಎಸಿಬಿ ಅಧಿಕಾರಿಗಳ ದಾಳಿ
ದಾವಣಗೆರೆ , ಮಂಗಳವಾರ, 21 ಆಗಸ್ಟ್ 2018 (17:08 IST)
ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ದಾವಣಗೆರೆಯಲ್ಲಿ ಎರಡು ಕಡೆಗಳಲ್ಲಿ ಎಸಿಬಿ ದಾಳಿ ನಡೆದಿದೆ. ಶಿಕಾರಿಪುರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಎಫ್‌ ಡಿ ಎ ಆಗಿರುವ ಚನ್ನಪ್ಪ ಮನೆ ಹಾಗೂ ಮಲೆಬೆನ್ನೂರಿನಲ್ಲಿ ಡಿಸಿಸಿ ಬ್ಯಾಂಕ್ ಅಸಿಸ್ಟಂಟ್ ಮ್ಯಾನೇಜರ್ ಆಗಿರುವ ಭೀಮನಗೌಡ ಮನೆ ಮೇಲೆ ದಾಳಿ ನಡೆದಿದೆ.

ದಾವಣಗೆರೆಯ ಆಜಾದ್ ನಗರದಲ್ಲಿರುವ ಚನ್ನಪ್ಪ ನಿವಾಸ, ಎಸ್ ಎಸ್ ಲೇಔಟ್ ನಲ್ಲಿರುವ ಭೀಮನಗೌಡನ ಮನೆ ಮೇಲೆ ಎಸಿಬಿ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಜಮೀನಿಗೆ ನುಗ್ಗಿದ ಕಾಲುವೆ ನೀರು; ಹೈರಾಣಾದ ಬೆಳೆಗಾರ