Webdunia - Bharat's app for daily news and videos

Install App

ಆಟೋದಲ್ಲಿ ಬಂದ ನಾಲ್ವರಿಂದ ಟೆಕ್ಕಿ ಯುವಕನ ಮೇಲೆ ಹಲ್ಲೆ

geetha
ಶುಕ್ರವಾರ, 9 ಫೆಬ್ರವರಿ 2024 (14:02 IST)
ಬೆಂಗಳೂರು-ಆಟೋದಲ್ಲಿ ಬಂದ ನಾಲ್ವರಿಂದ ಟೆಕ್ಕಿ ಯುವಕನ ಮೇಲೆ ಹಲ್ಲೆ ಯತ್ನಿಸಿ ಆರೋಪಿಗಳು ಬೈಕ್ ರಾಬರಿ ಮಾಡಲಾಗಿದೆ.ಸ್ನೇಹಿತನಿಗೆ ಡೆಬಿಟ್ ಕಾರ್ಡ್ ಕೊಡಲು  ಟೆಕ್ಕಿ ಇಮ್ಯಾನುಯೆಲ್ ಬಂದಿದ್ದ.ನೆನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ಚಂದ್ರಲೇಔಟ್ ನ ಬಿಸಿಸಿ ಲೇಔಟ್ ನಲ್ಲಿ ಘಟನೆ ನಡೆದಿದೆ.
 
ಮೊದಲಿಗೆ ಟೆಕ್ಕಿ ಬಳಿ ಬಂದು ನಾಲ್ವರು  ಅವಾಜ್ ಹಾಕಿದ್ದರು.ತಡರಾತ್ರಿ ಇಲ್ಲಿ ಏನ್ ಮಾಡ್ತಿದ್ದೀಯಾ...?ಯಾರೋ ನೀನು ಬ್ಯಾಗಲ್ಲಿ ಏನಿದೆ ದುಡ್ಡಿದ್ಯಾ ಅಂತ ಅವಾಜ್ ಹಾಕಿ ಆರೋಪಿಗಳು ಚೆಕ್ ಮಾಡಿದ್ದಾರೆ.ನಂತರ ಟೆಕ್ಕಿ ಬಳಿ ಹಣವಿಲ್ಲದಿದ್ದಾಗ ಬೈಕ್ ಕೀ ಕಸಿದು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ.ಆಟೋ ಹಿಂದೆ ಬೈಕ್ ಕೀ ಗಾಗಿ  ಟೆಕ್ಕಿ ಇಮ್ಯಾನುಯೆಲ್ ಓಡಿದ್ದಾನೆ.ಕಡೆಗೆ ಆಟೋವನ್ನು ಯೂ ಟರ್ನ್ ಮಾಡಿಕೊಂಡು ಬಂದು ಕಳ್ಲರು ಬೈಕ್ ಕದ್ದೊಯ್ದಿದ್ದರು.ಆಟೋದಲ್ಲಿ ಬಂದು ಬೈಕ್ ಕದ್ದೊಯ್ದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
 
ಕೂಡಲೇ ಪೊಲೀಸ್ ಕಂಟ್ರೋಲ್ ರೂಂ ಗೆ  ಟೆಕ್ಕಿ ಇಮ್ಯಾನುಯೆಲ್ ಕರೆ ಮಾಡಿದ್ದ.ನೆನ್ನೆ ತಡರಾತ್ರಿ ಬೈಕ್ ಕಳುವಾಗ್ತಿದ್ದಂತೆ ಏರಿಯಾ ಫುಲ್ ಹೊಯ್ಸಳ ಪೊಲೀಸರು ಬೀಟ್ ಹಾಕಿದ್ರು.ರಾತ್ರಿ ಬೈಕ್ ಕದ್ದೊಯ್ದು ಸಂಜೆ ವೇಳೆಗೆ ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ಇಮ್ಯಾನುಯೆಲ್ ನಿಂದ ದೂರು ನೀಡಲಾಗಿದೆ.ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ನಂಬರ್ ಪ್ಲೇಟ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಿನಲ್ಲಿ ಬಾಳೆ ಎಲೆ ರೇಟು ಬಲು ದುಬಾರಿ

Hebbal Accident: ಹೆಬ್ಬಾಳದಲ್ಲಿ ತಡರಾತ್ರಿ ಸರಣಿ ಅಪಘಾತ: ಲಾರಿ ಚಾಲಕ ದುರ್ಮರಣ

ಮುಂದಿನ ಸುದ್ದಿ
Show comments