Select Your Language

Notifications

webdunia
webdunia
webdunia
webdunia

ದೀಪಾವಳಿ ದಿನವೇ ಕತ್ತಲಲ್ಲಿ ಮುಳುಗಿದ 25 ಹಳ್ಳಿಗಳು

ದೀಪಾವಳಿ
ರಾಯಚೂರು , ಮಂಗಳವಾರ, 29 ಅಕ್ಟೋಬರ್ 2019 (19:47 IST)
ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದರೆ ಆ ಗ್ರಾಮಗಳಲ್ಲಿ ಮಾತ್ರ ಕಡು ಕತ್ತಲೆ ಇತ್ತು.

ರಾಯಚೂರು ತಾಲೂಕಿನ 33 ಕೆವಿ ವಿದ್ಯುತ್ ಮಾರ್ಗ ಸ್ಥಗಿತಗೊಂಡ ಪರಿಣಾಮ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳ ಜನರು ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿದ್ಯುತ್ ಮಾರ್ಗದ ನಿರ್ವಹಣೆಯಲ್ಲಿ ವ್ಯತ್ಯಾಸವಾಗಿದ್ದರಿಂದಾಗಿ ಹಬ್ಬದ ಸಂಭ್ರಮದಲ್ಲಿದ್ದ ಹಳ್ಳಿಗರು ರಾತ್ರಿ ಕತ್ತಲಲ್ಲೇ ಹಬ್ಬದ ಆಚರಣೆ ಮಾಡುವಂತಾಯಿತು.

ಜೆಸ್ಕಾಂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸವಿಲ್ಲದ ವ್ಯಕ್ತಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ