Publish Date: Tue, 29 Oct 2019 (19:40 IST)
Updated Date: Tue, 29 Oct 2019 (19:41 IST)
ವ್ಯಕ್ತಿಯೊಬ್ಬ ಕೆಲವಿಲ್ಲದ ಕಾರಣದಿಂದ ತನ್ನ ಹೆಂಡತಿ, ಮಕ್ಕಳನ್ನು ಸಾಕುವುದಕ್ಕೆ ಆಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ವಿಡಿಯೋ ಮಾಡಿದ್ದಾನೆ ಪೊಲೆಪಲ್ಲಿ ವೆಂಕಟೇಶ್. ಈಗ ಗುಂಟೂರ್ ನಿವಾಸಿಯಾಗಿದ್ದಾನೆ.
ಮರಳು ನೀತಿ ಬಗ್ಗೆ ಅಲ್ಲಿನ ಸರಕಾರ ಕಠಿಣ ಕ್ರಮ ಕೈಗೊಂಡ ಕಾರಣ ಅದರ ನೇರ ಪರಿಣಾಮ ಕಟ್ಟಡಗಳ ಕಾರ್ಮಿಕರ ಮೇಲಾಗುತ್ತಿದೆ. ಹೀಗಾಗಿ ಮೂರ್ನಾಲ್ಕು ತಿಂಗಳು ಕೆಲಸವಿಲ್ಲದೇ ಪರದಾಡಿದ ಕಟ್ಟಡ ಕಾರ್ಮಿಕ ವೆಂಕಟೇಶ್ ವಿಡಿಯೋ ಮಾಡಿ ಪ್ರಾಣ ಬಿಟ್ಟಿದ್ದಾನೆ.
ವೆಂಕಟೇಶ್ ವಿಡಿಯೋವನ್ನು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.