Select Your Language

Notifications

webdunia
webdunia
webdunia
webdunia

ಹುಡುಗಿಯರನ್ನು ಇಟ್ಟುಕೊಂಡು ಆ ಕೆಲಸ ಮಾಡುತ್ತಿದ್ದ ಭೂಪ ಅಂದರ್

ಹುಡುಗಿಯರನ್ನು ಇಟ್ಟುಕೊಂಡು ಆ ಕೆಲಸ ಮಾಡುತ್ತಿದ್ದ ಭೂಪ ಅಂದರ್
ರಾಮನಗರ , ಮಂಗಳವಾರ, 29 ಅಕ್ಟೋಬರ್ 2019 (16:22 IST)
ಹುಡುಗಿಯರನ್ನು ಬಳಸಿಕೊಂಡು ಟೆಲಿಕಾಲರ್ ಮೂಲಕ ಅಮಾಯಕರಿಂದ ಹಣ ದೋಚುತ್ತಿದ್ದ ಖದೀಮನ ಬಂಧನ ಮಾಡಲಾಗಿದೆ.

ಹುಡುಗಿಯರಿಂದ ಕರೆ ಮಾಡಿಸಿ ನಿಮಗೆ ಮೊಬೈಲ್ ಗಿಫ್ಟ್ ಬಂದಿದೆ ಅಂತ ಅಮಾಯಕರನ್ನು ನಂಬಿಸುತ್ತಿದ್ದ. ಆ ಬಳಿಕ ಹಣ ಕೊಟ್ಟು ಗಿಫ್ಟ್ ತೆಗೆದುಕೊಳ್ಳಿ ಅಂತ ಹೇಳಿಸುತ್ತಿದ್ದ. ಕೊನೆಗೆ ಯಾವುದೋ ಒಂದು ವಸ್ತುವನ್ನು ಕಳಿಸಿ ಹಣ ಪಡೆದು ಯಾಮಾರಿಸುತ್ತಿದ್ದನು.

ರಾಮನಗರ ಜಿಲ್ಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದ ನಿವಾಸಿ ಸತೀಶ್ ನನ್ನು ಬಂಧನ ಮಾಡಿದ್ದಾರೆ.

ಬಂಧಿತನಿಂದ 27 ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ ಡಿ.ಕೆ.ಶಿವಕುಮಾರ್