Publish Date: Tue, 29 Oct 2019 (16:12 IST)
Updated Date: Tue, 29 Oct 2019 (16:13 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನು ಪಡೆದು ಹೊರಬಂದ ಬಳಿಕ ಬಹಿರಂಗವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಶುರು ಮಾಡೋದಕ್ಕೆ ನಮ್ಮದೇನೂ ವಿರೋಧವಿಲ್ಲ. ಆದರೆ ಕನಕಪುರಕ್ಕೆ ಮಂಜೂರು ಮಾಡಲಾಗಿರೋ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರೆ ಅದು ಸರಿಯಲ್ಲ. ಸಿಎಂ ಯಡಿಯೂರಪ್ಪರ ನಿಲುವಿಗೆ ಖಂಡನೆ ವ್ಯಕ್ತಪಡಿಸೋದಾಗಿ ಡಿಕೆಶಿ ತಿಳಿಸಿದ್ದಾರೆ.
ಕೇಂದ್ರ ಸರಕಾರ ಈಗಾಗಲೇ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಸಮ್ಮತಿ ನೀಡಿದೆ. ಆದರೆ ಸಿಎಂ ಅನುಮತಿಯನ್ನೇ ರದ್ದು ಮಾಡಿದ್ದಾರೆ.
ನನ್ನ ಪ್ರಾಣ ಹೋದರೂ ಮೆಡಿಕಲ್ ಕಾಲೇಜು ರದ್ದು ಆಗಲು ಬಿಡೋದಿಲ್ಲ ಅಂತ ಕನಕಪುರ ಬಂಡೆ ಗುಡುಗಿದ್ದಾರೆ.