Publish Date: Tue, 09 Aug 2022 (08:50 IST)
Updated Date: Tue, 09 Aug 2022 (09:28 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಥಿಯೇಟರ್ ನಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಈ ನಡುವೆ ಚಿತ್ರದ ಟಿಕೆಟ್ ದರ ಕಡಿತಗೊಳಿಸಲಾಗಿದೆ ಎಂದು ಚಿತ್ರತಂಡ ಪ್ರಕಟಣೆ ನೀಡಿದೆ. ಇದಕ್ಕೆ ಕಾರಣ ಪೈರಸಿ ಕಾಟ ಎಂಬ ಉತ್ತರ ಸಿಕ್ಕಿದೆ.
ಚಿತ್ರ ಬಿಡುಗಡೆಯಾದ ದಿನವೇ ಪೈರಸಿಕೋರರು ಆನ್ ಲೈನ್ ನಲ್ಲಿ ಹರಿಯಬಿಟ್ಟಿದ್ದರು. ಇದರಿಂದ ಚಿತ್ರತಂಡಕ್ಕೆ ಸಮಸ್ಯೆಯಾಗಿತ್ತು. ಹಾಗಿದ್ದರೂ ವಿಕ್ರಾಂತ್ ರೋಣ ಈಗಾಗಲೇ 150 ಕೋಟಿ ರೂ. ಗಳಿಸಿ ಲಾಭ ಮಾಡಿಕೊಂಡಿದೆ. ಹೀಗಾಗಿ ಚಿತ್ರದ ಟಿಕೆಟ್ ದರವನ್ನು 150 ರೂ. ನಿಂದ 100 ರೂ.ಗೆ ಕಡಿತ ಮಾಡಲಾಗಿದೆ.