Select Your Language

Notifications

webdunia
webdunia
webdunia
webdunia

ರಾಜ್ಯ ಸಾರಿಗೆ ಬಗ್ಗೆ ಟಾಂಗ್ ಕೊಟ್ಟ ಅಲ್ಲು ಅರ್ಜುನ್ ಗೆ ನೋಟಿಸ್

ರಾಜ್ಯ ಸಾರಿಗೆ ಬಗ್ಗೆ ಟಾಂಗ್ ಕೊಟ್ಟ ಅಲ್ಲು ಅರ್ಜುನ್ ಗೆ ನೋಟಿಸ್
ಹೈದರಾಬಾದ್ , ಶುಕ್ರವಾರ, 12 ನವೆಂಬರ್ 2021 (17:35 IST)
ಹೈದರಾಬಾದ್: ರಾಜ್ಯ ರಸ್ತೆ ಸಾರಿಗೆ ಬಗ್ಗೆ ಜಾಹೀರಾತೊಂದರಲ್ಲಿ ವ್ಯಂಗ್ಯ ಮಾಡುವ ಡೈಲಾಗ್ ಹೊಡೆದ ನಟ ಅಲ್ಲು ಅರ್ಜುನ್ ಗೆ ತೆಲಂಗಾಣ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ, ದಿಶಾ ರೇಪ್ ಕೇಸ್ ಆರೋಪಿಗಳ ಎನ್ ಕೌಂಟರ್ ಮಾಡಿದ ಕನ್ನಡಿಗ ಅಧಿಕಾರಿ ಸಜ್ಜನರ್ ನೋಟಿಸ್ ನೀಡಿದ್ದಾರೆ.

ರ್ಯಾಪಿಡೋ ಎಂಬ ಬೈಕ್ ಸಾರಿಗೆ ಜಾಹೀರಾತೊಂದರಲ್ಲಿ ಅಲ್ಲು ಅರ್ಜುನ್ ರಾಜ್ಯ ರಸ್ತೆ ಸಾರಿಗೆಯನ್ನು ವ್ಯಂಗ್ಯ ಮಾಡಿದ್ದರು. ಈ ವಿಚಾರಕ್ಕೆ ಅಲ್ಲು ಅರ್ಜುನ್ ಮತ್ತು ರ್ಯಾಪಿಡೋ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

ಇನ್ನು, ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೇ ರ್ಯಾಪಿಡೋ ಅಲ್ಲು ಅರ್ಜುನ್ ರ ಈ ಜಾಹೀರಾತಿಗೆ ಕತ್ತರಿ ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳ ಪಟ್ಟಿ!