Publish Date: Fri, 12 Nov 2021 (08:35 IST)
Updated Date: Fri, 12 Nov 2021 (08:47 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಎಷ್ಟೋ ನಿರ್ದೇಶಕ, ನಿರ್ಮಾಪಕರು ತಯಾರಿ ನಡೆಸಿದ್ದರು. ಆದರೆ ಅದೆಲ್ಲಾ ಈಗ ಕನಸಾಗಿಯೇ ಉಳಿದಿದೆ.
ಅದೇ ರೀತಿ ಮದಗಜ ನಿರ್ದೇಶಕ ಮಹೇಶ್ ಕುಮಾರ್ ಕೂಡಾ ಪವರ್ ಸ್ಟಾರ್ ಜೊತೆ ಸಿನಿಮಾ ಮಾಡಬೇಕೆಂದು ಸ್ಕ್ರಿಪ್ಟ್ ಕೂಡಾ ತಯಾರಿ ಮಾಡಿದ್ದರಂತೆ. ಆದರೆ ಈಗ ಅಪ್ಪು ಸರ್ ಇಲ್ಲ. ಮುಂದಿನ ವರ್ಷ ಅವರಿಗಾಗಿ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣಲ್ಲಿ ಸಿನಿಮಾ ಮಾಡಬೇಕಿತ್ತು.
ಆದರೆ ಇನ್ನು, ಆ ಸಿನಿಮಾನ ಯಾರ ಜೊತೆಗೂ ಮಾಡಲ್ಲ. ಆ ಸ್ಕ್ರಿಪ್ಟ್ ನ ಸುಟ್ಟು ಹಾಕಿದ್ದೇನೆ. ಅವರು ಭೌತಿಕವಾಗಿ ನಮ್ಮ ಜೊತೆಗಿಲ್ಲದೇ ಇರಬಹುದು. ಆದರೆ ನಮ್ಮ ಮನಸ್ಸಲ್ಲಿ ಯಾವತ್ತಿಗೂ ಇರುತ್ತಾರೆ ಎಂದು ಮಹೇಶ್ ಹೇಳಿದ್ದಾರೆ.