Select Your Language

Notifications

webdunia
webdunia
webdunia
webdunia

ಓಡಿ ಅಪ್ಪು ಸಮಾಧಿ ತಲುಪಿದ ಮಹಿಳೆಗೆ ಶಿವರಾಜ್ ಕುಮಾರ್ ಸತ್ಕಾರ

ಓಡಿ ಅಪ್ಪು ಸಮಾಧಿ ತಲುಪಿದ ಮಹಿಳೆಗೆ ಶಿವರಾಜ್ ಕುಮಾರ್ ಸತ್ಕಾರ
ಬೆಂಗಳೂರು , ಬುಧವಾರ, 15 ಡಿಸೆಂಬರ್ 2021 (10:30 IST)
Photo Courtesy: Twitter
ಬೆಂಗಳೂರು: ಧಾರವಾಡದಿಂದ 500 ಕಿ.ಮೀಗಳಷ್ಟು ದೂರ ಓಡಿ ಬಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ತಲುಪಿದ ದ್ರಾಕ್ಷಾಯಣಿಗೆ ಶಿವರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಕಳೆದ 14 ದಿನಗಳಿಂದ ಓಡುತ್ತಲೇ ಬಂದ ದ್ರಾಕ್ಷಾಯಣಿ ದಾರಿಯುದ್ದಕ್ಕೂ ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸಿದ್ದಾರೆ. ಮೂವರು ಮಕ್ಕಳ ತಾಯಿಯಾಗಿರುವ ದ್ರಾಕ್ಷಾಯಣಿ ಸಾಧನೆಯನ್ನು ರಾಘಣ್ಣ ಕೂಡಾ ಕೊಂಡಾಡಿದ್ದರು. ಅಲ್ಲದೆ, ನಿನ್ನೆ ಆಕೆ ಸಮಾಧಿ ಬಳಿ ತಲುಪಿದಾಗ ಯುವರಾಜ್ ಕುಮಾರ್ ಬರಮಾಡಿಕೊಂಡು ಸನ್ಮಾನಿಸಿದ್ದರು.

ಅದಾದ ಬಳಿಕ ಶಿವರಾಜ್ ಕುಮಾರ್ ದ್ರಾಕ್ಷಾಯಣಿಯನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸನ್ಮಾನಿಸಿದ್ದಾರೆ. ಅಲ್ಲದೆ, ಆಕೆಯ ಸಾಧನೆಯ ಹಾದಿ ಬಗ್ಗೆ ವಿಚಾರಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಕಬ್ಜ ಶೂಟಿಂಗ್ ನಲ್ಲಿ ಮುಕುಂದ-ಮುರಾರಿ ಜೋಡಿಯ ಕಮಾಲ್