Select Your Language

Notifications

webdunia
webdunia
webdunia
webdunia

ಕೊನೆಗೂ ಓಡುತ್ತಾ ಅಪ್ಪು ಸಮಾಧಿ ತಲುಪಿದ ದ್ರಾಕ್ಷಾಯಣಿ

ದ್ರಾಕ್ಷಾಯಣಿ
ಬೆಂಗಳೂರು: ಧಾರವಾಡದಿಂದ ಓಟದ ಮೂಲಕ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಲು ಬರುತ್ತಿದ್ದ ಮಹಿಳೆ ದ್ರಾಕ್ಷಾಯಿಣಿ ಕೊನೆಗೂ ಸಮಾಧಿ ತಲುಪಿದ್ದಾರೆ.

ಕಳೆದ 14 ದಿನಗಳಿಂದ ಓಟದ ಮೂಲಕವೇ ತನ್ನ ಮಕ್ಕಳ ಜೊತೆಗೆ ಸಮಾಧಿ ಬಳಿ ಬರುತ್ತಿದ್ದ ದ್ರಾಕ್ಷಾಯಿಣಿ ಇಂದು ಕೊನೆಗೂ ಬಂದು ತಲುಪಿದ್ದಾರೆ.

ಇನ್ನು, ಸಮಾಧಿ ಬಳಿ ಬಂದ ದ್ರಾಕ್ಷಾಯಣಿಯನ್ನು ಸ್ವತಃ ಯುವರಾಜ್ ಕುಮಾರ್ ಸ್ವಾಗತಿಸಿದ್ದಾರೆ. ಈ ವೇಳೆ ಅಪ್ಪು ಅಭಿಮಾನಿಗಳು ಆಕೆಯ ಸಾಧನೆಗೆ ಸನ್ಮಾನಿಸಿದ್ದಾರೆ. ಕೇವಲ ಓಟ ಮಾತ್ರವಲ್ಲದೆ, ತನ್ನ ಜೊತೆಗೆ ಬರುತ್ತಿದ್ದ ವಾಹನದಲ್ಲಿ ನೇತ್ರದಾನದ ಫಲಕವಿಟ್ಟು ಪುನೀತ್ ರಂತೇ ನೇತ್ರದಾನ ಮಾಡುವಂತೆ ಜಾಗೃತಿ ಮೂಡಿಸಿದ್ದರು. ಆಕೆಯ ಸಾಧನೆಯನ್ನು ಗುರುತಿಸಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಬೆಂಗಳೂರಿಗೆ ಬಂದ ಮೇಲೆ ಭೇಟಿ ಮಾಡುವುದಾಗಿ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೈಯಲ್ಲಿ ಎಣ್ಣೆ ಬಾಟ್ಲು, ಸುತ್ತಮುತ್ತ ಫ್ರೆಂಡ್ಸ್! ಬಡವ ರಾಸ್ಕಲ್ ಧನಂಜಯ್ ಹೊಸ ಅವತಾರ