Select Your Language

Notifications

webdunia
webdunia
webdunia
webdunia

ಮದುವೆ ಆಮಂತ್ರಣದಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ ಗೌರವ ನೀಡಿದ ಯುವ ಜೋಡಿ

ಪುನೀತ್ ರಾಜ್ ಕುಮಾರ್
ಬೆಂಗಳೂರು: ಪುನೀತ್ ಅಗಲಿ ತಿಂಗಳು ಕಳೆದರೂ ಅವರ ನೆನಪು ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿದೆ. ಇದೀಗ ಯುವ ಜೋಡಿಯೊಂದು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಪ್ಪು ಫೋಟೋ ಪ್ರಕಟಿಸಿ ಅಭಿಮಾನ ಮೆರೆದಿದ್ದಾರೆ.

ಬಾಗಲಕೋಟೆಯ ಶ್ರೀಧರ ಮತ್ತು ಸವಿತಾ ಎಂಬ ಜೋಡಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪುನೀತ್ ಭಾವಚಿತ್ರ ಮತ್ತು ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಸಾಲು ಬರೆದು ಗೌರವ ಸಲ್ಲಿಸಿದೆ.

ವಧು-ವರ ಇಬ್ಬರೂ ಪುನೀತ್ ಅಭಿಮಾನಿಗಳು. ಪುನೀತ್ ನಿಧನ ಇಬ್ಬರಿಗೂ ನೋವು ತಂದಿದೆ. ಅವರ ಸಾಮಾಜಿಕ ಕಾರ್ಯಗಳೇ ಇವರಿಗೆ ಸ್ಪೂರ್ತಿಯಂತೆ. ಆ ಕಾರಣಕ್ಕೆ ಮದುವೆ ಪತ್ರಿಕೆಯಲ್ಲಿ ಪುನೀತ್ ಫೋಟೋ ಪ್ರಕಟಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ಹೈಲೈಟ್ ಆಗಿದ್ದಕ್ಕೆ ರಶ್ಮಿಕಾ ಮಂದಣ್ಣಗೆ ಬೇಸರ?