Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ವಿರುದ್ಧ ಸ್ಪರ್ಧೆಗೆ ತೊಡೆ ತಟ್ಟಿದ ರಾಮ್ ಗೋಪಾಲ್ ವರ್ಮ

Ram Gopal Verma

Krishnaveni K

ಹೈದರಾಬಾದ್ , ಗುರುವಾರ, 14 ಮಾರ್ಚ್ 2024 (17:24 IST)
Photo Courtesy: Twitter
ಹೈದರಾಬಾದ್: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ನಟ ಪವನ್ ಕಲ್ಯಾಣ್ ಸ್ಪರ್ಧಿಸುತ್ತಿದ್ದು, ಅವರಿಗೆ ಎದುರಾಗಿ ತಾನು ಸ್ಪರ್ಧಿಸುವುದಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪವನ್ ಕಲ್ಯಾಣ್ ಕಾಕಿನಾಡ ಜಿಲ್ಲೆಯ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದೀಗ ಅದೇ ಕ್ಷೇತ್ರದಿಂದ ತಾನೂ ಸ್ಪರ್ಧಿಸುವುದಾಗಿ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

ಆದರೆ ಇದೂ ಕೂಡಾ ಸುಖಾ ಸುಮ್ಮನೇ ಪ್ರಚಾರ ನಿಮಿತ್ತ ಗಿಮಿಕ್ಕಾ? ಅಥವಾ ನಿಜವಾಗಿಯೂ ರಾಮ್ ಗೋಪಾಲ್ ವರ್ಮ ಸ್ಪರ್ಧೆ ಮಾಡಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ.  ನಾನು ರಾಜಕೀಯಕ್ಕೆ ಬರಲು ತೀರ್ಮಾನಿಸಿದ್ದೇನೆ. ಪೀಠಾಪುರಂ ಕ್ಷೇತ್ರದಿಂದ ನಾನು ಸ್ಪರ್ಧೆ ನಡೆಸಲಿದ್ದೇನೆ ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಪೀಠಾಪುರಂನಿಂದ ಸ್ಪರ್ಧಿಸುವುದಾಗಿ ಹೇಳಿದ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮ ಹೀಗೊಂದು ಟ್ವೀಟ್ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದು ಒಂದು ಗಿಮಿಕ್ ಇರಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಇತ್ತೀಚೆಗೆ ಇಬ್ಬರೂ ಸ್ಟಾರ್ ಗಳ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಹೀಗಾಗಿ ಪವನ್ ಕಾಲೆಳೆಯಲು ವರ್ಮಾ ಹೀಗೆ ಮಾಡಿರಬಹುದಾ ಎಂಬ ಗುಮಾನಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಆಗಿರುವ ಕಾರಣ ನನಗೆ ಮತ್ತೇ ಮದುವೆಯಾಗುವ ಹಕ್ಕಿದೆ: ರಾಖಿ ಸಾವಂತ್‌ ಪತಿ ಆದಿಲ್ ಖಾನ್