Select Your Language

Notifications

webdunia
webdunia
webdunia
webdunia

ಪುನೀತ್ ಅಭಿಮಾನಿಗಳ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಹಿಜಾಬ್ ಗಲಾಟೆ

ಪುನೀತ್ ಅಭಿಮಾನಿಗಳ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಹಿಜಾಬ್ ಗಲಾಟೆ
ಬೆಂಗಳೂರು , ಬುಧವಾರ, 16 ಮಾರ್ಚ್ 2022 (16:56 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಒಂದೆಡೆಯಾದರೆ, ಅವರ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆ ಸಮಯ. ನಾಳೆ ಈ ಎರಡೂ ಕಾರಣಕ್ಕೆ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆಗೆ ಯೋಜನೆ ಹಾಕಿಕೊಂಡಿದ್ದರು. ಆದರೆ ಅವರ ಆಸೆಗೆ ಈಗ ಹಿಜಾಬ್ ಗಲಾಟೆ ಕಡಿವಾಣ ಹಾಕಿದೆ.

ಜೇಮ್ಸ್ ರಿಲೀಸ್ ಆಗುತ್ತಿರುವ ಬೆಂಗಳೂರಿನ ಪ್ರಮುಖ ಥಿಯೇಟರ್ ಗಳಲ್ಲಿ ಪುನೀತ್ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಹಿಜಾಬ್ ಗಲಾಟೆಯಿಂದಾಗಿ ಸೆಕ್ಷನ್ 144 ಜಾರಿಯಲ್ಲಿದ್ದು, ಇಂತಹ ಆಚರಣೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.

ಅದು ಸಾಲದೆಂಬಂತೆ ಗುಂಪು ಗುಂಪಾಗಿ ಸೇರಿ ಅದ್ಧೂರಿ ಆಚರಣೆ ಮಾಡುವಂತೆಯೂ ಇಲ್ಲ. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲ ಕೊಡದ ವಿಚಾರಕ್ಕೆ ಕಿರಿಕ್ಕು: ಶಿಲ್ಪಾ ಶೆಟ್ಟಿ ತಾಯಿ, ಸಹೋದರಿ ವಿರುದ್ಧ ವಾರಂಟ್