Select Your Language

Notifications

webdunia
webdunia
webdunia
webdunia

ನನ್ನ ಅಜಯ್ ದೇವಗನ್ ನಡುವೆ ಮೂರನೆಯವರು ತಂದಿಟ್ಟಿದ್ದರು: ಕಿಚ್ಚ ಸುದೀಪ್

ನನ್ನ ಅಜಯ್ ದೇವಗನ್ ನಡುವೆ ಮೂರನೆಯವರು ತಂದಿಟ್ಟಿದ್ದರು: ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 20 ಜುಲೈ 2022 (10:00 IST)
ಬೆಂಗಳೂರು: ಹಿಂದಿ ರಾಷ್ಟ್ರಭಾಷೆ ಎಂಬ ಕುರಿತಾಗಿ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ಆಗಿತ್ತು. ಈ ಬಗ್ಗೆ ಸುದೀಪ್ ಈಗ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಂದು ನಮ್ಮಿಬ್ಬರ ನಡುವೆ ಯಾರೋ ಮೂರನೇ ವ್ಯಕ್ತಿ ಅನವಶ್ಯಕವಾಗಿ ವಿವಾದ ತಂದಿಟ್ಟಿದ್ದರು ಎಂದು ಸುದೀಪ್ ಅನುಮಾನಿಸಿದ್ದಾರೆ.

‘ನನಗೆ ಗೊತ್ತಿರುವ ಹಾಗೆ ಅಜಯ್ ಯಾವತ್ತೂ ಹಿಂದಿಯಲ್ಲಿ ಟ್ವೀಟ್ ಮಾಡುವ ವ್ಯಕ್ತಿಯೇ ಅಲ್ಲ. ನನ್ನ ಮಾತನ್ನು ಯಾರೋ ತಪ್ಪಾಗಿ ಅರ್ಥ ಬರುವಂತೆ ಅಜಯ್ ದೇವಗನ್ ಗೆ ತಂದಿಟ್ಟಿದ್ದರು. ಆದರೆ ನಾನು ಸ್ಪಷ್ಟನೆ ನೀಡಿದ ಕೂಡಲೇ ಅಜಯ್ ರಿಟ್ವೀಟ್ ಮಾಡಿ ನನಗೆ ಉತ್ತರ ಸಿಕ್ಕಿತು ಎಂದು ಧನ್ಯವಾದ ಸಲ್ಲಿಸಿದರು. ಆ ಮೂರನೇ ವ್ಯಕ್ತಿ ಯಾರೋ ನನಗೆ ಗೊತ್ತಿರುವವರೇ ಆಗಿದ್ದಾರೆ. ಆದರೆ ಯಾರು ಎಂದು ನಾನು ಇಲ್ಲಿ ಖಚಿತವಾಗಿ ಹೇಳಲಾರೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಪ್ರಿಯ ಮಲಯಾಳಂ ನಟನೊಂದಿಗೆ ನಿತ್ಯಾ ಮೆನನ್ ಮದುವೆ