Select Your Language

Notifications

webdunia
webdunia
webdunia
webdunia

ಸೌತ್ ಸಿನಿಮಾ ವರ್ಸಸ್ ನಾರ್ತ್ ಚರ್ಚೆ ಬಗ್ಗೆ ಹೊಸ ಹೇಳಿಕೆ ನೀಡಿದ ಕಿಚ್ಚ ಸುದೀಪ್

ಸೌತ್ ಸಿನಿಮಾ ವರ್ಸಸ್ ನಾರ್ತ್ ಚರ್ಚೆ ಬಗ್ಗೆ ಹೊಸ ಹೇಳಿಕೆ ನೀಡಿದ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 19 ಜುಲೈ 2022 (16:05 IST)
ಬೆಂಗಳೂರು: ಹಿಂದಿ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳ ಬಗ್ಗೆ ಈ ಮೊದಲು ಅಜಯ್ ದೇವಗನ್ ಜೊತೆ ಟ್ವೀಟ್ ವಾರ್ ನಡೆಸಿದ್ದ ಕಿಚ್ಚ ಸುದೀಪ್ ಈಗ ಈ ವಾದದ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ.

ವಿಕ್ರಾಂತ್ ರೋಣ ಪ್ರಮೋಷನ್ ನಡೆಸುತ್ತಿರುವ ಸುದೀಪ್ ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಮೊದಲೆಲ್ಲಾ ನಾವು ಸ್ಯಾಟ್ ಲೈಟ್ ತಾರೆಗಳಾಗಿದ್ದೆವು. ಯಾಕೆಂದರೆ ನಮ್ಮ ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಟಿವಿಯಲ್ಲಿ ಡಬ್ ಆಗಿ ಪ್ರಸಾರವಾಗುತ್ತಿದ್ದವು. ನನ್ನ ಕೆಂಪೇಗೌಡ ಸಿನಿಮಾ ಹಿಂದಿಯಲ್ಲಿ ಬಾಜಿರಾವ್ ಎಂಬ ಟೈಟಲ್ ನಲ್ಲಿ ಡಬ್ ಆಗಿ ಪ್ರಸಾರವಾಗಿತ್ತು. ಹೀಗಾಗಿ ಉತ್ತರದ ಜನ ನನ್ನನ್ನು ನೋಡಿ ಈತ ಬಾಜಿ ರಾವ್ ಹೀರೋ ಎನ್ನುತ್ತಿದ್ದರು. ಆದರೆ ಈಗ ಹಾಗಲ್ಲ. ದಕ್ಷಿಣ ಭಾರತದ ಸಿನಿಮಾಗಳೂ ಅಲ್ಲಿ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿವೆ’ ಎಂದು ಸುದೀಪ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಂದ್ರ ಸ್ಟೋರ್ಸ್ ಬಿಡುಗಡೆ ದಿನಾಂಕ ಮುಂದೂಡಿಕೆ: ಹೊಂಬಾಳೆ ಫಿಲಂಸ್ ಘೋಷಣೆ