Select Your Language

Notifications

webdunia
webdunia
webdunia
webdunia

BBK11: ಪುತ್ತೂರಿನ ಮುತ್ತು ಧನರಾಜ್ ಆಚಾರ್ ಗೆ ಆರಂಭದಲ್ಲೇ ಶಾಕ್ ನೀಡಿದ ಕಿಚ್ಚ ಸುದೀಪ್

Dhanaaj Achar

Krishnaveni K

ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2024 (09:48 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿ ಪುತ್ತೂರಿನ ಮುತ್ತು ಧನರಾಜ್ ಆಚಾರ್ ಮನಯೊಳಗೆ ಪ್ರವೇಶಿಸಿದ್ದಾರೆ. ಆದರೆ ಮನೆಯೊಳಗೆ ಪ್ರವೇಶಿಸುವ ಮುನ್ನವೇ ಅವರಿಗೆ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ.

ರೀಲ್ಸ್ ಕಂಟೆಂಟ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಧನರಾಜ್ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್. ಜೊತೆಗೆ ಸ್ಯಾಂಡಲ್ ವುಡ್ ನಲ್ಲಿ, ಕಿರುತೆರೆಯಲ್ಲೂ ಸಣ್ಣ ಪುಟ್ಟ ಪಾತ್ರ ಮಾಡಿ ಮಿಂಚಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಕಾಮಿಡಿ ಕಂಟೆಂಟ್ ಗಳನ್ನೇ ಇಷ್ಟಪಡುವ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ.

ಇದೀಗ ಅವರು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಆದರೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವ ಮೊದಲು ವೇದಿಕೆಯಲ್ಲಿ ಅವರ ಹಳೆಯ ರೀಲ್ಸ್ ಒಂದನ್ನು ಪ್ಲೇ ಮಾಡಲಾಯಿತು. ಇದರಲ್ಲಿ ಅವರು ಬಿಗ್ ಬಾಸ್ ನಲ್ಲಿ ಟಿಆರ್ ಪಿಗಾಗಿ ಜಗಳ ಮಾಡಲಾಗುತ್ತದೆ ಎಂದಿದ್ದರು. ಇದನ್ನು ಅವರಿಗೆ ತೋರಿಸಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು.

‘ನಾವ್ ಹೆಂಗೆ ಕಾಣಿಸ್ತೀವಿ ನಿಮಗೆ? ತಮಾಷೆ ಮಾಡೋ ವ್ಯಕ್ತಿ ಹಾಗೆ ಕಾಣಿಸ್ತೀನಾ? ಜಗಳ ಮಾಡೋದು ಟಿಆರ್ ಪಿಗಾಗಾ? ಬಿಗ್ ಬಾಸ್ ಮೇಲೆ ಗೌರವವಿಲ್ಲದ ವ್ಯಕ್ತಿನಾ ಯಾಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಗಂಭೀರವಾಗಿ ಪ್ರಶ್ನಿಸಿದರು. ಗಾಬರಿಗೊಂಡ ಧನರಾಜ್ ಅದು ತಮಾಷೆಗಾಗಿ ಮಾಡಿದ ವಿಡಿಯೋ ಎಂದು ಕ್ಷಮೆ ಕೇಳಿದರು.

ಆಗ ಸುದೀಪ್ ತಮ್ಮ ಎಂದಿನ ಶೈಲಿಯಲ್ಲೇ ನಕ್ಕರು. ಆಗ ಧನರಾಜ್ ಗೆ ಹೋದ ಜೀವ ಬಂದಂತಾಯಿತು. ಈಗಷ್ಟೇ ಧನರಾಜ್ ಗೆ ಹೆಣ್ಣು ಮಗುವಾಗಿದೆ. ಮಗುವಾಗಿ ಕೆಲವೇ ದಿನಕ್ಕೆ ಈಗ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಹಾಸ್ಯಕ್ಕೆ ಹೆಸರುವಾಸಿಯಾದ ಧನರಾಜ್ ಬಿಗ್ ಬಾಸ್ ಮನೆಯಲ್ಲೂ ನಗು ಮೂಡಿಸಬಹುದು ಎಂಬ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಶ್ರಾವಣಿ ಮೇಲೆ ಸಮೀರ್ ಆಚಾರ್ಯ ಹಲ್ಲೆ ಕೇಸ್: ಜಸ್ಟಿಸ್ ಫಾರ್ ಸಂಯುಕ್ತಾ ಹೆಗಡೆ ಎಂದಿದ್ಯಾಕೆ ನೆಟ್ಟಿಗರು