Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸೀಸನ್ 11: ದೊಡ್ಮನೆ ಆಟಕ್ಕೆ ನಾನಿಲ್ಲ, ಬೈ ಬೈ ಎಂದ ಕಿರಣ್ ರಾಜ್

Kiran Raj

Krishnaveni K

ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2024 (15:12 IST)
ಬೆಂಗಳೂರು: ಇಂದಿನಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದ್ದು, ಕಿರುತೆರೆಯಲ್ಲಿ ಕನ್ನಡತಿ ಧಾರವಾಹಿ ಮೂಲಕ ಮನಗೆದ್ದ ಹೀರೋ ಕಿರಣ್ ರಾಜ್ ಕೂಡಾ ಓರ್ವ ಸ್ಪರ್ಧಾಳುವಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೀಗ ಅವರೇ ಉತ್ತರ ಕೊಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳು ಯಾರು ಎಂದು ಕಲರ್ಸ್ ವಾಹಿನಿ ಕೆಲವು ಬ್ಲರ್ ಫೋಟೋಗಳನ್ನು ಹರಿಯಬಿಟ್ಟಿತ್ತು. ಇದರಲ್ಲಿ ಒಬ್ಬರ ಮುಖ ಥೇಟ್ ಕಿರಣ್ ರಾಜ್ ರನ್ನು ಹೋಲುತ್ತಿದೆ. ಇದನ್ನು ನೋಡಿ ಕಿರಣ್ ರಾಜ್ ಈ ಬಾರಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂದು ಸುದ್ದಿಯಾಗಿತ್ತು.

ಇದರ ಬೆನ್ನಲ್ಲೇ ಕಿರಣ್ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ಬಿಡುಗಡೆಯಾಗಿದೆ. ಆ ಸಿನಿಮಾದ ಸಕ್ಸಸ್ ಗೆ ಧನ್ಯವಾದ ಸಲ್ಲಿಸಿರುವ ಕಿರಣ್ ರಾಜ್ ಬಿಬಿಕೆ ಶೋಗೆ ನಾನು ಬರುತ್ತಿಲ್ಲ ಎನ್ನುವುದೇ ಸತ್ಯ ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ಕಿರಣ್ ರಾಜ್ ಒಂದು ವಾರ ಕಾಲ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದರು. ಈಗ ರಿಯಲ್ ಕಂಟೆಸ್ಟೆಂಟ್ ಆಗಿ ಹೋಗಬಹುದು. ಅವರು ಹೋದರೆ ಈ  ಬಾರಿ ಅವರೇ ವಿನ್ ಆಗೋದು ಎಂದು ಜನ ಹೇಳಿಕೊಂಡಿದ್ದರು. ಆದರೆ ಈಗ ಅವರೇ ತಾನು ಭಾಗಿಯಾಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೂಳೆಬ್ಬಿಸಿದ ಎನ್‌ಟಿಆರ್‌ ಸಿನಿಮಾ ದೇವರ: ಮೊದಲ ದಿನವೇ ದಾಖಲೆ ಕಲೆಕ್ಷನ್‌