Select Your Language

Notifications

webdunia
webdunia
webdunia
webdunia

ಯಶ್-ಅಲ್ಲು ಅರ್ಜುನ್ ಗೆ ಕಂಗನಾ ರನಾವತ್ ಬುದ್ಧಿಮಾತು

ಯಶ್-ಅಲ್ಲು ಅರ್ಜುನ್ ಗೆ ಕಂಗನಾ ರನಾವತ್ ಬುದ್ಧಿಮಾತು
ಮುಂಬೈ , ಬುಧವಾರ, 26 ಜನವರಿ 2022 (10:32 IST)
ಮುಂಬೈ: ಬಾಲಿವುಡ್ ನಲ್ಲೂ ಸದ್ದು ಮಾಡುವಂತಹ ಸಿನಿಮಾ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್, ಅಲ್ಲು ಅರ್ಜುನ್ ಗೆ ಬಾಲಿವುಡ್ ನಟಿ ಕಂಗನಾ ರನಾವತ್ ಬುದ್ಧಿಮಾತು ಹೇಳಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಂಗನಾ ರನಾವತ್, ಯಶ್, ಅಲ್ಲು ಅರ್ಜುನ್ ಸೇರಿದಂತೆ ಯಶಸ್ಸು ಕಾಣುತ್ತಿರುವ ದಕ್ಷಿಣ ಭಾರತೀಯ ನಟರಿಗೆ ಕಿವಿ ಮಾತು ಹೇಳಿದ್ದಾರೆ.

ದಕ್ಷಿಣ ಭಾರತದ ನಟರಾದ ಯಶ್, ಅಲ್ಲು ಅರ್ಜುನ್ ಅಂತಹವರು ತಮ್ಮ ಕುಟುಂಬಕ್ಕೆ ಮಹತ್ವ ಕೊಡುತ್ತಾರೆ. ಇವರು ಭಾರತೀಯ ಪರಂಪರೆಯನ್ನು ಪ್ರತಿನಿಧಿಸುತ್ತಾರೆ. ಹೀಗಾಗಿಯೇ ಇವರು ಯಶಸ್ಸು ಕಾಣುತ್ತಿದ್ದಾರೆ. ನೀವು ಯಾರೂ ಬಾಲಿವುಡ್ ನವರಂತೆ ಭ್ರಷ್ಟರಾಗಬೇಡಿ. ಪಾಶ್ಚಾತ್ಯ ಪರಂಪರೆಯ ಪ್ರಭಾವಕ್ಕೊಳಗಾಗದಿರಿ ಎಂದು ಕಂಗನಾ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಟಿಟಿಗೆ ಬಂದ ಬಡವ ರಾಸ್ಕಲ್