Select Your Language

Notifications

webdunia
webdunia
webdunia
webdunia

ಸ್ಟಾರ್ ನಟರ ಹೆಸರಿನಲ್ಲಿ ಕಚ್ಚಾಡುವ ಅಭಿಮಾನಿಗಳಿಗೆ ನಟ ಜಗ್ಗೇಶ್ ಹೇಳಿದ್ದೇನು?

ಸ್ಟಾರ್ ನಟರ ಹೆಸರಿನಲ್ಲಿ ಕಚ್ಚಾಡುವ ಅಭಿಮಾನಿಗಳಿಗೆ ನಟ ಜಗ್ಗೇಶ್ ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (09:04 IST)
ಬೆಂಗಳೂರು: ಇತ್ತೀಚೆಗೆ ಕನ್ನಡದಲ್ಲಿ ಸ್ಟಾರ್ ಗಿರಿ ಹೆಚ್ಚಾಗುತ್ತಿದೆ. ಸ್ಟಾರ್ ನಟರ ನಡುವೆ ವೈಮನಸ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಹೆಸರಿನಲ್ಲಿ ಕೆಲವು ಅಭಿಮಾನಿಗಳಂತೂ ಸೋಷಿಯಲ್ ಮೀಡಿಯಾಗಳ ಮೂಲಕ ವಾರ್ ನಡೆಸುತ್ತಿರುವುದು ಸಾಮಾನ್ಯವಾಗಿದೆ.


ಇಂತಹ ಪುಂಡರಿಗೆ ನವರಸನಾಯಕ ಜಗ್ಗೇಶ್ ಎಚ್ಚರಿಕೆ ಕೊಟ್ಟಿದ್ದಾರೆ. ನಿಮ್ಮ ಅಭಿಮಾನ ಪ್ರಶಂಸನೀಯ. ಆದರೆ ಅವರ ಹೆಸರಿನಲ್ಲಿ ಪರಸ್ಪರ ತೆಗಳುವ ಕೆಲಸ ಮಾಡಬೇಡಿ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದ ಕಲಾವಿದರ ಅಭಿಮಾನಿಗಳಿಗೆ ಕಿವಿಮಾತು. ನಿಮ್ಮ ಪ್ರೀತಿ ಇಷ್ಟಪಟ್ಟವರ ಮೇಲೆ ಪ್ರಶಂಸನೀಯ. ಯಾವುದೇ ಕಾರಣಕ್ಕೂ ತೆಗಳುವಿಕೆ ಬೇಡ. ಎಲ್ಲಾ ನಟರು ತಮ್ಮ ಶಕ್ಯಾನುಸಾರ ಕನ್ನಡ ತೇರನ್ನು ಎಳೆಯುತ್ತಿದ್ದಾರೆ. ಕನ್ನಡಿಗನ ನಿಜವಾದ ಧರ್ಮ ಕನ್ನಡ ಸೇವಕನ ಭುಜ ತಟ್ಟುವುದು. ಕನ್ನಡಿಗ ಕನ್ನಡಿಗನ ತೆಗಳಿದರೆ ನಮ್ಮ ನಾವೇ ಅವಮಾನಿಸಿದಂತೆ’ ಎಂದು ಜಗ್ಗೇಶ್ ಕಿವಿ ಮಾತು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಪುತ್ರ ಗುರುರಾಜ್ ‘ವಿಷ್ಣುಸರ್ಕಲ್’ ಈ ವಾರ ತೆರೆಗೆ