Publish Date: Mon, 26 Aug 2019 (09:51 IST)
Updated Date: Mon, 26 Aug 2019 (09:54 IST)
ಬೆಂಗಳೂರು: ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಿಂದ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇಂದಿಗೂ ಕುರುಕ್ಷೇತ್ರ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ.
ದರ್ಶನ್ ಪೌರಾಣಿಕ ಪಾತ್ರಕ್ಕೂ ಒಪ್ಪುತ್ತಾರೆ ಎನ್ನುವುದು ಈ ಚಿತ್ರದಿಂದ ಸಾಬೀತಾಗಿದೆ. ಈ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಡಿ ಬಾಸ್ ದರ್ಶನ್ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಗಾಗ ತಮ್ಮ ಜೀವನದ ಮಹತ್ವದ ಸಂದರ್ಭದಲ್ಲಿ ದರ್ಶನ್ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. ನಿನ್ನೆ ಕೂಡಾ ದರ್ಶನ್ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ನಡುವೆ ಅಭಿಮಾನಿಗಳು ದರ್ಶನ್ ಕೈ ಕುಲುಕಿ, ಸೆಲ್ಫೀ ತೆಗೆದು ಖುಷಿಪಟ್ಟರು.