Select Your Language

Notifications

webdunia
webdunia
webdunia
webdunia

ಪ್ರಭಾಸ್ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ ಕೇಳಿ ಫ್ಯಾನ್ಸ್ ಶಾಕ್!

ಪ್ರಭಾಸ್ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ ಕೇಳಿ ಫ್ಯಾನ್ಸ್ ಶಾಕ್!
ಹೈದರಾಬಾದ್ , ಶುಕ್ರವಾರ, 19 ಆಗಸ್ಟ್ 2022 (08:40 IST)
ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಶಾಕ್ ನೀಡಿದ್ದಾರೆ.

ಪ್ರಭಾಸ್ ಹೆಸರು ನಟಿ ಅನುಷ್ಕಾ ಶೆಟ್ಟಿ ಜೊತೆ ಕೇಳಿಬಂದಿತ್ತು. ಆದರೆ ಬಾಹುಬಲಿ ಜೋಡಿ ತಮ್ಮ ನಡುವೆ ಅಂತಹದ್ದೇನೂ ಇಲ್ಲ ಎಂದಿದ್ದರು. ಇದಾದ ಬಳಿಕವೂ ಪ್ರಭಾಸ್ ಹೋದಲ್ಲೆಲ್ಲಾ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿಬರುತ್ತಲೇ ಇರುತ್ತದೆ.

ಇದೀಗ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ಕಂಕಣ ಭಾಗ್ಯದ ಬಗ್ಗೆ ಮಾತನಾಡಿದ್ದು, ಒಂದು ವೇಳೆ ರೆಬಲ್ ಸ್ಟಾರ್ ಮದುವೆಯಾದರೆ ದಿವಂಗತ ನಟ ಉದಯ್ ಕಿರಣ್ ಗಾದ ಸ್ಥಿತಿಯೇ ಎದುರಾಗಲಿದೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಉದಯ್ ಕಿರಣ್ ತಮ್ಮ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಮೆಗಾಸ್ಟಾರ್ ಚಿರಂಜೀವಿ ಪುತ್ರಿಯ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡು, ಬಳಿಕ ಬ್ರೇಕಪ್ ಆಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಪ್ರಭಾಸ್ ಬಗ್ಗೆ ವೇಣು ಸ್ವಾಮಿ ಹೇಳಿದ ಭವಿಷ್ಯ ಕೇಳಿ ಫ್ಯಾನ್ಸ್ ನಿಜಕ್ಕೂ ಶಾಕ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಹೀರೋಯಿನ್ ಬಗ್ಗೆ ಇಂದು ಹೊಸ ಮಾಹಿತಿ