Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ ನಿರ್ದೇಶಕ ಪ್ರಶಾಂತ್ ನೀಲ್ -ಅಲ್ಲು ಅರ್ಜುನ್ ಭೇಟಿ

ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ ನಿರ್ದೇಶಕ ಪ್ರಶಾಂತ್ ನೀಲ್ -ಅಲ್ಲು ಅರ್ಜುನ್ ಭೇಟಿ
ಹೈದರಾಬಾದ್ , ಗುರುವಾರ, 11 ಮಾರ್ಚ್ 2021 (08:48 IST)
ಹೈದರಾಬಾದ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಇದು ಈಗ ಟಾಲಿವುಡ್ ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಗಿದೆ.

ಹೈದರಾಬಾದ್ ನ ಗೀತಾ ಆರ್ಟ್ಸ್ ಕಚೇರಿಯಲ್ಲಿ ಚಿತ್ರದ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದರು ಎನ್ನಲಾಗಿದೆ. ಅಲ್ಲುಅರ್ಜುನ್ ಕಚೇರಿಯಿಂದ ಹೊರಬರುತ್ತಿರುವ ಫೋಟೊ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರು ನಟ ಪ್ರಭಾಸ್ ಅವರೊಂದಿಗೆ ಈಗಾಗಲೇ ಸಲಾರ್ ಚಿತ್ರ ಮಾಡುತ್ತಿದ್ದಾರೆ. ಬಳಿಕ ಅವರು ಜೂನಿಯರ್ ಎನ್ ಟಿಆರ್ ಅವರ ಜೊತೆಗೆ ಚಿತ್ರ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಹೀಗಾಗಿ  ಪ್ರಶಾಂತ್ ನೀಲ್ ಮತ್ತು ಅಲ್ಲು ಅರ್ಜುನ್ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನಿಯರ್ ಎನ್ ಟಿಆರ್ ‘ಎವಾರು ಮೀಲೊ ಕೋಟೀಸ್ ವರಲು’ ಕಾರ್ಯಕ್ರಮದ ರಸಪ್ರಶ್ನೆ ಸೋರಿಕೆ