Select Your Language

Notifications

webdunia
webdunia
webdunia
webdunia

ಅಣ್ಣನನ್ನು ಕಾಪಾಡುವಂತೆ ಚಾಮುಂಡಿದೇವಿ ಮೊರೆ ಹೋದ ದಿನಕರ್ ತೂಗುದೀಪ್

Actor Darshan Arrest

Sampriya

ಮೈಸೂರು , ಶುಕ್ರವಾರ, 26 ಜುಲೈ 2024 (15:47 IST)
Photo Courtesy X
ಮೈಸೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಈ ಪ್ರಕರಣದಿಂದ ಪಾರು ಮಾಡಲು ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ಕಾನೂನು ಹೋರಾಟ ನಡೆಸುವ ಜತೆಗೆ ಇದೀಗ ದೇವರ ಮೊರೆ ಹೋಗುತ್ತಿದ್ದಾರೆ.

ಇಂದು ವಿಜಯಲಕ್ಷ್ಮೀ ಅವರು ಕೊಲ್ಲೂರು ಮುಕಾಂಬಿಕೆಯ ಸನ್ನಿಧಿಯಲ್ಲಿ ಗಂಡನಿಗೆ ಒಳ್ಳೆಯದಾಗಲಿ ಎಂದು ಚಂಡಿಕಾಯಾಗ ಮಾಡಿಸಿದ್ದಾರೆ. ಸಹೋದರ ದಿನಕರ್ ತೂಗುದೀಪ್ ಅವರು ತಮ್ಮ ಪತ್ನಿ, ಅಳಿಯ ಹಾಗೂ ನಟ ಚಿಕ್ಕಣ್ಣ ಜತೆ ಚಾಮುಂಡಿ ದೇವಿಯ ಆಶೀವಾರ್ದ ಪಡೆದರು.

ಅಣ್ಣನನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ದಿನಕರ್ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನೂ ಪತಿ ದರ್ಶನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ್ ಅವರು ಒಟ್ಟಾಗಿ ಕಾನೂನಿನ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆಯೂ ಪತಿಯನ್ನು ಕಾಪಾಡುವಂತೆ ಪತ್ನಿ ವಿಜಯಲಕ್ಷ್ಮೀ ಅವರು ಪವರ್ ಫುಲ್ ದೇವರ ಮೊರೆ ಹೋಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟ ವಿನೋದ್ ರಾಜ್ ಯಾರ ಹೆಸರಿಗೆ ಚೆಕ್ ಬರೆದ್ರು, ಎಷ್ಟು ದುಡ್ಡು ಕೊಟ್ರು