Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟ ವಿನೋದ್ ರಾಜ್ ಯಾರ ಹೆಸರಿಗೆ ಚೆಕ್ ಬರೆದ್ರು, ಎಷ್ಟು ದುಡ್ಡು ಕೊಟ್ರು

Vinod Raj

Krishnaveni K

ಚಿತ್ರದುರ್ಗ , ಶುಕ್ರವಾರ, 26 ಜುಲೈ 2024 (14:54 IST)
Photo Credit: Instagram
ಚಿತ್ರದುರ್ಗ: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಇಂದು ಭೇಟಿ ಕೊಟ್ಟ ನಟ ವಿನೋದ್ ರಾಜ್ ತಮ್ಮಿಂದಾದ ಧನ ಸಹಾಯ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು 16 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣ ಕೋರ್ಟ್ ನಲ್ಲಿದೆ. ಈ ವೇಳೆ ಸಾಕಷ್ಟು ಜನ ದರ್ಶನ್ ಭೇಟಿಗೆ ಜೈಲಿಗೆ ಬಂದು ಹೋಗುತ್ತಿದ್ದಾರೆ. ಅವರ ವಿರುದ್ಧ ಸಾಕ್ಷ್ಯಗಳೂ ಸ್ಟ್ರಾಂಗ್ ಆಗಿರುವ ಕಾರಣ ಸದ್ಯಕ್ಕಂತೂ ಬಿಡುಗಡೆಯಾಗುವ ಸಾಧ್ಯತೆಯಿಲ್ಲ.

ಈ ನಡುವೆ ಮೃತ ರೇಣುಕಾಸ್ವಾಮಿ ಕುಟುಂಬ ಈಗ ಮನೆ ಮಗನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ದುಡಿಯುತ್ತಿದ್ದ ಮಗನನ್ನು ಕಳೆದುಕೊಂಡು ಆರ್ಥಿಕವಾಗಿಯೂ ಅತಂತ್ರವಾಗಿದೆ. ಈ ಹಿನ್ನಲೆಯಲ್ಲಿ ಇಂದು ನಟ ವಿನೋದ್ ರಾಜ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಈಗಾಗಲೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರೂ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಧನ ಸಹಾಯ ಮಾಡಿತ್ತು. ಮೊನ್ನೆಯಷ್ಟೇ ದರ್ಶನ್ ರನ್ನು ಭೇಟಿ ಮಾಡಿದ್ದ ವಿನೋದ್ ರಾಜ್ ಇಂದು ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿಗೆ ಅನಾರೋಗ್ಯದ ನಡುವೆಯೂ ಚಿತ್ರದುರ್ಗಕ್ಕೆ ಬಂದಿದ್ದರು.

ರೇಣುಕಾಸ್ವಾಮಿಯ ತಂದೆಯ ಕಾಲುಮುಟ್ಟಿ ನಮಸ್ಕರಿಸಿದ ವಿನೋದ್ ರಾಜ್ ಬಳಿಕ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಅಲ್ಲದೆ, ಸ್ಥಳದಲ್ಲಿಯೇ 1 ಲಕ್ಷ ರೂ.ಗಳಿಗೆ ಚೆಕ್ ಬರೆದು ಕುಟುಂಬಸ್ಥರಿಗೆ ನೀಡಿದರು. ರೇಣುಕಾಸ್ವಾಮಿ ಪತ್ನಿ ಸಹನಾ ಹೆಸರಿಗೆ ವಿನೋದ್ ರಾಜ್ 1 ಲಕ್ಷ ರೂ.ಗಳ ಚೆಕ್ ಬರೆದು ಹಸ್ತಾಂತರಿಸಿದರು. ನನ್ನ ಕೈಲಾದ ಸಹಾಯ ಮಾಡಿದ್ದೇನೆ. ನಿಮಗೆ ಏನೇ ಸಹಾಯ ಬೇಕಿದ್ದರೂ ನಾನಿರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ಭೇಟಿಯ ಬೆನ್ನಲ್ಲೇ ರೇಣುಕಾ ಸ್ವಾಮಿ ಮನೆಗೆ ತೆರಳಿ ಧೈರ್ಯ ತುಂಬಿದ ವಿನೋದ್‌ರಾಜ್‌