Select Your Language

Notifications

webdunia
webdunia
webdunia
webdunia

'ನಿನ್ನ ನಂಬಿ ತಪ್ಪು ಮಾಡ್ಬೀಟ್ಟೆ': ಜೈಲಿನಲ್ಲಿ ಸ್ನೇಹಿತನ ಮೇಲೆ ದರ್ಶನ್ ಗರಂ

'ನಿನ್ನ ನಂಬಿ ತಪ್ಪು ಮಾಡ್ಬೀಟ್ಟೆ': ಜೈಲಿನಲ್ಲಿ ಸ್ನೇಹಿತನ ಮೇಲೆ ದರ್ಶನ್ ಗರಂ

Sampriya

ಬೆಂಗಳೂರು , ಶನಿವಾರ, 20 ಜುಲೈ 2024 (14:05 IST)
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಒಂದು ತಿಂಗಳು ಕಳೆಯುತ್ತಿದ್ದ ಹಾಗೇ ನಟ ದರ್ಶನ್ ಅವರು ತಮ್ಮ ಸ್ನೇಹಿತನ ಮೇಲೆ ಕೂಗಾಡಿದ್ದಾರೆಂಬ ಮಾಹಿತಿಯಿದೆ.

ಪರಪ್ಪನ ಅಗ್ರಹಾರದಲ್ಲಿ ಒಂದೇ ಕೋಣೆಯಲ್ಲಿರುವ ಪ್ರಕರಣದ ಮತ್ತೋರ್ವ ಆರೋಪಿಯಾದ ಪ್ರದೂಷ್ ಮೇಲೆ ದರ್ಶನ್ ಅವರು ಗರಂ ಆಗಿದ್ದಾರೆ. ರೇಣುಕಾಸ್ವಾಮಿ ಪ್ರಕರಣವನ್ನು ಬೇರೆ ರೀತಿ ಡೀಲ್ ಮಾಡ್ಬೋದಿತ್ತು. ನಿನ್ನಿಂದಲೇ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಸ್ನೇಹಿತ ಪ್ರದೂಷ್ ಮೇಲೆ ದರ್ಶನ್ ಅವರು ಕೂಗಾಡಿದ್ದಾರೆ.

ಇನ್ನೂ ಪ್ರಕರಣವನ್ನು ಪ್ರದೂಷ್ ಡೀಲ್ ಮಾಡುವುದಾಗಿ ದರ್ಶನ್ ಬಳಿ ಹೇಳಿಕೊಂಡಿದ್ದಾನೆ. ಇದನ್ನು ನಂಬಿದ್ದ ದರ್ಶನ್ ಇದೀಗ ಜೈಲು ಸೇರಿದ್ದಾರೆ. ಜೈಲು ಸೇರಿದ ನಂತರ ಮಾನಸಿಕವಾಗಿ ಕುಗ್ಗಿರುವ ದರ್ಶನ್ ಅವರು ಈ ಪ್ರಕರಣದಿಂದ ಹೊರ ಬರಲು ಪತ್ನಿ ಜತೆ ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.

ಇದರ ಮಧ್ಯೆ ತನ್ನ ಪರಿಸ್ಥಿತಿಗೆ ಪ್ರದೂಷ್ ಮಾಡಿದ ಪ್ಲ್ಯಾನ್‌ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ನನ್ನ ಈ ಪರಿಸ್ಥಿತಿಗೆ ನೀನೇ ಕಾರಣ. ನಿನ್ನ ನಂಬಿ ತಪ್ಪು ಮಾಡ್ಬೀಟ್ಟೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಈಗ ದರ್ಶನ್ ಗ್ಯಾಂಗ್ ನಡುವೆಯೇ ವಾರ್ ಶುರು