Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಈಗ ದರ್ಶನ್ ಗ್ಯಾಂಗ್ ನಡುವೆಯೇ ವಾರ್ ಶುರು

Darshan

Krishnaveni K

ಬೆಂಗಳೂರು , ಶನಿವಾರ, 20 ಜುಲೈ 2024 (10:43 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಗ್ಯಾಂಗ್ ನಡುವೆಯೇ ಈಗ ವಾರ್ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದರ್ಶನ್ ಆಂಡ್ ಗ್ಯಾಂಗ್ ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದೆ. ಡಿ ಗ್ಯಾಂಗ್ ವಿರುದ್ಧ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಬಲ ಸಾಕ್ಷ್ಯವನ್ನೇ ಸಂಗ್ರಹಿಸಿದ್ದಾರೆ. ಅವರಿಗೆ ಈಗ ಹೊರಗೆ ಬರುವುದು ಅಷ್ಟು ಸುಲಭವಲ್ಲ.

ಮೊನ್ನೆಯಷ್ಟೇ ಮತ್ತೆ ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಅದಾದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾದರೂ ಆಗಲೂ ಜಾಮೀನು ಸಿಗುವುದು ಕಷ್ಟವೇ. ಹೀಗಾಗಿ ದರ್ಶನ್ ತಮ್ಮ ಸಂಗಡಿಗ ಪ್ರದೋಶ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ಪ್ರದೋಶ್ ಮೇಲೆ ಕೂಗಾಡಿದ್ದಾರಂತೆ. ಇದಕ್ಕೆ ಪ್ರದೋಶ್ ಕೂಡಾ ತಿರುಗೇಟು ನೀಡಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಾದ ಬಳಿಕ ಪ್ರದೋಶ್ ಇತರೆ ಆರೋಪಿಗಳ  ಬೆಂಬಲ ಪಡೆಯಲು ಪ್ರಯತ್ನಿಸಿದ್ದಾರೆ. ರೇಣುಕಾಸ್ವಾಮಿ ಸಾವಿನ ಬಳಿಕ ಆತನ ಶವವನ್ನು ಎಸೆಯಲು ಪ್ಲ್ಯಾನ್ ಮಾಡಿದ್ದು ಇದೇ ಪ್ರದೋಶ್. ಆತನಿಗೆ ದರ್ಶನ್ 30 ಲಕ್ಷ ರೂ. ಹಣವನ್ನು ನೀಡಿದ್ದರು ಎನ್ನಲಾಗಿದೆ. ಇದೀಗ ದರ್ಶನ್ ಮತ್ತು ಪ್ರದೋಶ್ ನಡುವೆಯೇ ಕಿತ್ತಾಟವಾದ ಮಾತು ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಿತ ಹೇಳಿಕೆ ನೀಡಿ ವಿವಾದ ಬೆಳೆಸಬೇಡಿ ಎಂದು ಕ್ಷಮೆ ಯಾಚಿಸಿದ ಹಂಸಲೇಖ