Select Your Language

Notifications

webdunia
webdunia
webdunia
webdunia

ದರ್ಶನ್ ಮಾತ್ರವಲ್ಲ, ರೇಣುಕಾಸ್ವಾಮಿ ಕುಟುಂಬಕ್ಕೂ ಸಹಾಯಕ್ಕೆ ಮುಂದಾದ ವಿನೋದ್ ರಾಜ್

Vinod Raj

Krishnaveni K

ಬೆಂಗಳೂರು , ಶುಕ್ರವಾರ, 26 ಜುಲೈ 2024 (11:04 IST)
Photo Credit: Instagram
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಗೀಡಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ನಟ ವಿನೋದ್ ರಾಜ್ ಭೇಟಿ ಮಾಡಲು ಹೊಟರಿದ್ದಾರೆ. ಈ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯ ಮಾಡಲಿದ್ದಾರೆ.

ಮೊನ್ನೆಯಷ್ಟೇ ವಿನೋದ್ ರಾಜ್ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ನಟ ದರ್ಶನ್ ರನ್ನು ಭೇಟಿ ಮಾಡಿ ಬಂದಿದ್ದರು. ಅದಾದ ಬಳಿಕ ದರ್ಶನ್ ರನ್ನು ಯಾವತ್ತೂ ಕೈ ಬಿಡಬೇಡ ಎಂದು ಅಮ್ಮ (ಹಿರಿಯ ನಟಿ ಲೀಲಾವತಿ) ಹೇಳಿದ್ದರು ಎಂದು ಕಣ್ಣೀರು ಹಾಕಿದ್ದರು. ಇದನ್ನು ನೋಡಿ ನೆಟ್ಟಿಗರು ಮೊದಲು ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿ ಎಂದಿದ್ದರು.

ಅದರಂತೆ ಈಗ ವಿನೋದ್ ರಾಜ್ ಚಿತ್ರದುರ್ಗಕ್ಕೆ ತೆರಳಿ ರೇಣುಕಾಸ್ವಾಮಿ ಪೋಷಕರು, ಪತ್ನಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೊರಟಿದ್ದಾರೆ. ಬರೀ ಅಷ್ಟೇ ಅಲ್ಲದೇ 1 ಲಕ್ಷ ರೂ. ಹಣವನ್ನೂ ಸಹಾಯದ ರೂಪದಲ್ಲಿ ನೀಡಲಿದ್ದಾರೆ. ಇದಕ್ಕಾಗಿ ಇಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೊರಟಿದ್ದಾರೆ.

ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ಧನ ನೀಡಿತ್ತು. ಹಲವಾರು ಸಂಘ-ಸಂಸ್ಥೆಗಳೂ ನೆರವಾಗಿದ್ದರು. ಕುಟುಂಬಕ್ಕೆ ಆರ್ಥಿಕವಾಗಿ ಏಕೈಕ ಆಧಾರವಾಗಿದ್ದ ರೇಣುಕಾಸ್ವಾಮಿಯನ್ನು ಕಳೆದುಕೊಂಡಿದ್ದರಿಂದ ಅವರ ಪತ್ನಿಗೆ ಸರ್ಕಾರೀ ನೌಕರಿ ಕೊಡಿ ಎಂದು ಈಗಾಗಲೇ ಅವರ ತಂದೆ ಕಾಶೀನಾಥಯ್ಯ ಸರ್ಕಾರಕ್ಕೆ ಮೊರೆಯಿಡುತ್ತಿದ್ದಾರೆ. ಇದಕ್ಕೆ ಟೀಕೆಗಳೂ ಕೇಳಿಬಂದಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ದರ್ಶನ್ ಗಾಗಿ ಕೊಲ್ಲೂರು ಮೂಕಾಂಬಿಕೆಗೆ ಮಳೆಯನ್ನೂ ಲೆಕ್ಕಿಸದೇ ಪೂಜೆ ಮಾಡಿದ ವಿಜಯಲಕ್ಷ್ಮಿ