Select Your Language

Notifications

webdunia
webdunia
webdunia
webdunia

ಆ 3 ಸೆಕೆಂಡ್‌ನ ವಿಡಿಯೋ ಸಿಕ್ಕರೆ ದರ್ಶನ್‌ ಮುಂದಿನ ಕತೆಯೇನು

ಆ 3 ಸೆಕೆಂಡ್‌ನ ವಿಡಿಯೋ ಸಿಕ್ಕರೆ ದರ್ಶನ್‌ ಮುಂದಿನ ಕತೆಯೇನು

Sampriya

ಬೆಂಗಳೂರು , ಶನಿವಾರ, 20 ಜುಲೈ 2024 (16:25 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕು ಮಾಡಿಕೊಂಡಿದೆ. ಇನ್ನೂ ತನಿಖೆಯನ್ನು ಬಗೆದಷ್ಟು ಹಲವು ವಿಚಾರಗಳು ಹೊರಬರುತ್ತಿದ್ದು, ಇದೀಗ ಭಯಾನಕ ವಿಚಾರವೊಂದು ತನಿಖೆಯಲ್ಲಿ ಹೊರ ಬಿದ್ದಿದೆ.

ರೇಣುಕಾಸ್ವಾಮಿಗೆ ದರ್ಶನ್ ಅವರು ಥಳಿಸುತ್ತಿರುವ ಕೆಲ ಸೆಕೆಂಡ್‌ನ ವಿಡಿಯೋವನ್ನು ಅಲ್ಲೇ ಇದ್ದ ಆರೋಪಿಯೊಬ್ಬ ತಮ್ಮ ಐಫೋನ್‌ನಲ್ಲಿ ಸೆರೆಹಿಡಿದಿರುವ ವಿಚಾರ ಬೆಳಕಿಗೆ ಬಂದಿದೆ.

ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಈಗಾಗಕೇ 200ಕ್ಕೂ ಅಧಿಕ ಸಾಕ್ಷ್ಯಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ರೇಣುಕಾಸ್ವಾಮಿಗೆ ದರ್ಶನ್ ಅವರು ಹೊಡೆಯುವ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ನಂತರ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆಂದು ತಿಳಿದು ಬಂದಿದೆ.

ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಪ್ರದೂಷ್ ಎಂಬಾಂತ ವಿಡಿಯೋ ಸೆರೆ ಮಾಡಿರುವುದಾಗಿ ಗೊತ್ತಾಗಿದೆ. ನಂತರ ಆ ವಿಡಿಯೋ ಡಿಲೀಟ್ ಮಾಡಿರುವುದಾಗಿ ಪ್ರದೂಷ್ ಒಪ್ಪಿಕೊಂಡಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.

ಇನ್ನೂ ರೇಣುಕಾಸ್ವಾಮಿಗೆ ಹೊಡೆಯುತ್ತಿರುವ ವಿಡಿಯೋವನ್ನು ಸ್ವತಃ ದರ್ಶನ್ ಅವರೇ ವಿಡಿಯೋ ಮಾಡಲು ಹೇಳಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.  ದರ್ಶನ್ ಹೇಳಿದಂತೆ ಪ್ರದೂಷ್ ತಮ್ಮ ಐಫೋನ್‌ನಲ್ಲಿ ಮೂರು ಸೆಕೆಂಡ್ ದೃಶ್ಯ ರೆಕಾರ್ಡ್‌ ಮಾಡಿ ಬಳಿಕ ಸ್ಟಾಪ್ ಮಾಡಿ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಸಾಧನೆಯನ್ನು ಹೆಮ್ಮೆಯಿಂದ ಹಂಚಿಕೊಂಡ ಮಲಯಾಳಿ ನಟ ದಿಲೀಪ್