Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಮತ್ತು ರಾಣಾ ದಗ್ಗುಬಾಟಿಗೆ ಧನ್ಯವಾದ ತಿಳಿಸಿದ ಅನುಷ್ಕಾ ಶೆಟ್ಟಿ

ಅಲ್ಲು ಅರ್ಜುನ್ ಮತ್ತು ರಾಣಾ ದಗ್ಗುಬಾಟಿಗೆ ಧನ್ಯವಾದ ತಿಳಿಸಿದ ಅನುಷ್ಕಾ ಶೆಟ್ಟಿ
ಹೈದರಾಬಾದ್ , ಶನಿವಾರ, 10 ಅಕ್ಟೋಬರ್ 2020 (11:38 IST)
ಹೈದರಾಬಾದ್ : ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುವ ನಟಿ ಅನುಷ್ಕಾ ಶೆಟ್ಟಿ ಅವರು, ಇದೀಗ ತಾವು ಅಭಿನಯಿಸಿದ ‘ರುದ್ರಮಾ ದೇವಿ’ ಬಿಡುಗಡೆಯಾಗಿ 5ನೇ ವರ್ಷಾಚರಣೆಯನ್ನು ನೆನೆದು ನಟ ಅಲ್ಲು ಅರ್ಜುನ್ ಹಾಗೂ ರಾಣಾ ದಗ್ಗುಬಾಟಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಹೌದು,  ಅನುಷ್ಕಾ ಶೆಟ್ಟಿ ಅಭಿನಯದ ‘ರುದ್ರಮಾದೇವಿ’ ಬಹು ಬಜೆಟ್ ನಲ್ಲಿ ಮೂಡಿಬಂದ ಮಹಿಳಾ ಕೇಂದ್ರಿತ ಮೊದಲ ಚಿತ್ರವಾಗಿದೆ. ಇದನ್ನು 2015ರ ನಂ.3 ಚಿತ್ರವೆಂದು ಪಟ್ಟಿ ಮಾಡಲಾಗಿದೆ. ಈ ಐತಿಹಾಸಿಕ ಚಿತ್ರದಲ್ಲಿ ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದರೆ, ನಟ ರಾಣಾ ದಗ್ಗುಬಾಟಿ ಸಹನಟನಾಗಿ ನಟಿಸಿದ್ದಾರೆ.

ಆದಕಾರಣ ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಅನುಷ್ಕಾ ಶೆಟ್ಟಿ, ಈ ಪ್ರಯಣ ನನಗೆ ತುಂಬಾ ವಿಶೇಷವಾಗಿದೆ. ಅಲ್ಲು ಅರ್ಜುನ್ ಮತ್ತು ರಾಣಾ ದಗ್ಗುಬಾಟಿ ಈ ಚಿತ್ರವನ್ನು ಅದ್ಭುತಗೊಳಿಸಿದ್ದೀರಿ. ಈ ಅದ್ಭುತ ಇತಿಹಾಸವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ತೆರೆಗೆ ತಂದ ನಿರ್ದೇಶಕ ಗುಣಶೇಖರ್ ಮತ್ತು ತಂಡಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ಮಾಡುತ್ತಿದ್ದ ಸಂಜನಾಗೆ ಇಂದು ಜೈಲಲ್ಲೇ ಹುಟ್ಟುಹಬ್ಬದೂಟ