ಅಹಮ್ಮದಾಬಾದ್: ನಾಯಕರಾಗಿ ಮೊದಲ ಬಾರಿಗೆ, ಆಟಗಾರನಾಗಿ ಐದನೇ ಬಾರಿ ಐಪಿಎಲ್ ಫೈನಲ್ ಗೆದ್ದ ಖುಷಿಯಲ್ಲಿರುವ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ ಬಳಿಕ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ಇಡೀ ತಂಡಕ್ಕೆ ಗೆಲುವಿನ ಕ್ರೆಡಿಟ್ ಕೊಟ್ಟಿರುವ ಹಾರ್ದಿಕ್ ವಿಶೇಷವಾಗಿ ಬೌಲರ್ ಗಳನ್ನು ಕೊಂಡಾಡಿದ್ದಾರೆ. ಐದು ಬಾರಿ ಐಪಿಎಲ್ ಚಾಂಪಿಯನ್ ಆದ ತಂಡದ ಜೊತೆಗಿರುವ ಅದೃಷ್ಟವಂತ ತಾನು ಎಂದು ಹಾರ್ದಿಕ್ ಹೇಳಿದ್ದಾರೆ.
ಇನ್ನು, ಐಪಿಎಲ್ ನಲ್ಲಿ ಆಟಗಾರನಾಗಿಯೂ ಯಶಸ್ವಿಯಾಗಿರುವ ಹಾರ್ದಿಕ್ ತಮ್ಮ ಮುಂದಿನ ಗುರಿ ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲುವು ಕೊಡಿಸುವುದು ಎಂದಿದ್ದಾರೆ. ನನ್ನ ಜೀವನದ ಬಹುದೊಡ್ಡ ಗುರಿ ಎಂದರೆ ಭಾರತಕ್ಕೆ ವಿಶ್ವಕಪ್ ಗೆಲುವು ಕೊಡಿಸುವುದು. ಅದೇನೇ ಬರ್ಲಿ, ವಿಶ್ವಕಪ್ ನಲ್ಲಿ ನನ್ನ ಸಾಮರ್ಥ್ಯ ಮೀರಿ ಪ್ರಯತ್ನ ಪಡುವುದಾಗಿ ಹಾರ್ದಿಕ್ ಹೇಳಿದ್ದಾರೆ.