Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಭವಿಷ್ಯ ನಿರ್ಧರಿಸಲಿರುವ ಧೋನಿ

ಸುರೇಶ್ ರೈನಾ ಭವಿಷ್ಯ ನಿರ್ಧರಿಸಲಿರುವ ಧೋನಿ
ಮುಂಬೈ , ಸೋಮವಾರ, 7 ಸೆಪ್ಟಂಬರ್ 2020 (11:49 IST)
ಮುಂಬೈ: ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬಂದಿರುವ ಸುರೇಶ್ ರೈನಾ ಮತ್ತೆ ಸಿಎಸ್ ಕೆ ಮರಳುವ ಕುರಿತು ನಾಯಕ ಧೋನಿ ನಿರ್ಧಾರ ತೆಗೆದುಕೊಳ‍್ಳಲಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.


ಈ ಮೊದಲೂ ಸಿಎಸ್ ಕೆ ಮಾಲಿಕ ಶ್ರೀನಿವಾಸನ್ ಇದನ್ನೇ ಹೇಳಿದ್ದರು. ಅದರ ಬೆನ್ನಲ್ಲೇ ರೈನಾ ಮತ್ತೆ ತಂಡವನ್ನು ಕೂಡಿಕೊಳ್ಳಬಹುದು ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ತಕ್ಕಂತೆ ರೈನಾ ಈಗ ಮತ್ತೆ ವರ್ಕೌಟ್ ಆರಂಭಿಸಿದ್ದು, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಅವರು ವಾಪಸಾತಿ ಆಗಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದಾರೆ. ಆದರೆ ಅವರ ತಂಡಕ್ಕೆ ಮರಳಿ ಬರಬೇಕೇ ಬೇಡವೇ ಎಂಬುದರ ಅಂತಿಮ ತೀರ್ಮಾನವನ್ನು ಧೋನಿ ತೆಗೆದುಕೊಳ್ಳಲಿದ್ದಾರೆ ಎಂದು ಸಿಎಸ್ ಕೆ ಸ್ಪಷ್ಟಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13 ರ ವೇಳಾಪಟ್ಟಿ ಪ್ರಕಟ ಇಂತಿದೆ