Select Your Language

Notifications

webdunia
webdunia
webdunia
webdunia

ರಾಜಸ್ಥಾನ್ ವಿರುದ್ಧ ಸೋಲಿನ ಬಳಿಕ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದು ಹೀಗೆ

ರಾಜಸ್ಥಾನ್ ವಿರುದ್ಧ ಸೋಲಿನ ಬಳಿಕ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದು ಹೀಗೆ
ದುಬೈ , ಬುಧವಾರ, 22 ಸೆಪ್ಟಂಬರ್ 2021 (09:31 IST)
ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕೇವಲ 2 ರನ್ ಗಳಿಂದ ಸೋತ ಬಳಿಕ ಕಿಂಗ್ಸ್ ಪಂಜಾಬ್ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ.


‘ಈ ಸೋಲು ಕಹಿಯಾದ ಗುಳಿಗೆಯಂತೆ. ಅದನ್ನು ನಾವು ಅರಗಿಸಿಕೊಳ್ಳಲೇಬೇಕು’ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇನ್ನು, ನಾಯಕ ಕೆಎಲ್ ರಾಹುಲ್ ಕೂಡಾ ಇದೇ ಮಾತು ಹೇಳಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ಅನಿಲ್ ಕುಂಬ್ಳೆ ‘ನಾವು 19 ನೇ ಓವರ್ ನಲ್ಲಿಯೇ ಪಂದ್ಯ ಮುಗಿಸಬೇಕೆಂದು ಗುರಿ ಹಾಕಿಕೊಂಡಿದ್ದೆವು. ಆದರೆ ದುರದೃಷ್ಟವಷಾತ್ ಕೊನೆಯ ಓವರ್ ಗೂ ಮುಂದುವರಿಯಿತು. ಹೊಸ ಬ್ಯಾಟ್ಸ್ ಮನ್ ಕಣಕ್ಕಿಳಿದರೆ ಲಾಟರಿಯಂತೆ. ಕಾರ್ತಿಕ್ ತ್ಯಾಗಿ ಕೊನೆಯ ಓವರ್ ಚೆನ್ನಾಗಿ ಮಾಡಿದರು’ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಡೆಲ್ಲಿಗೆ ಹೈದರಾಬಾದ್ ಸವಾಲು